
ನವದೆಹಲಿ(ಸೆ.24): ಭೂ ಸೇನೆ ಮತ್ತು ವಾಯು ಸೇನಾ ಮುಖ್ಯಸ್ಥರು ಹಾಗೂ ನೌಕಾ ಸೇನೆಯ ಉಪ ಮುಖ್ಯಸ್ಥರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಉರಿ ದಾಳಿಯ ಬಳಿಕ ಸೇನಾ ಮುಖ್ಯಸ್ಥರು ಪ್ರಧಾನಿಯವರನ್ನು ಭೇಟಿಯಾಗಿರುವುದು ಮಹತ್ವವನ್ನು ಪಡೆದಿದೆ. ಆದರೆ ಇದೊಂದು ವಾಡಿಕೆಯ ಸಾಮಾನ್ಯ ಭೇಟಿಯಾಗಿತ್ತು ಎಂದು ಸೇನಾ ಮೂಲಗಳು ಹೇಳಿವೆ.
ವಿವಿಧ ವಿಷಯಗಳ ಕುರಿತಂತೆ ಸೇನಾ ಮುಖ್ಯಸ್ಥರು ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಂಪ್ರದಾಯ ಪ್ರತಿ ತಿಂಗಳು ಇರುತ್ತದೆ. ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್, ವಾಯು ಸೇನಾ ಮುಖ್ಯಸ್ಥ ಮಾರ್ಷಲ್ ಅರೂಪ್ ರಾಹ ಮತ್ತು ನೌಕಾ ಸೇನಾ ಉಪ ಮುಖ್ಯಸ್ಥ ಅಡ್ಮಿರಲ್ ಕೆಬಿ ಸಿಂಗ್ ಪ್ರಧಾನಿಯವರನ್ನು ಭೇಟಿಯಾಗಿದ್ದಾರೆ. ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ನಗರದಿಂದ ಹೊರಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.