ಹಣ ಕೊಡಿ, ಇಲ್ಲ ಜೈಲಿಗೆ ಹೋಗಿ: ನಟ ದ್ವಾರಕೀಶ್‌ಗೆ ಸಂಕಷ್ಟ..!

Published : Dec 10, 2018, 08:53 PM ISTUpdated : Dec 10, 2018, 08:59 PM IST
ಹಣ ಕೊಡಿ, ಇಲ್ಲ ಜೈಲಿಗೆ ಹೋಗಿ: ನಟ ದ್ವಾರಕೀಶ್‌ಗೆ ಸಂಕಷ್ಟ..!

ಸಾರಾಂಶ

ಚೆಕ್ ಬೌನ್ಸ್ ಪ್ರಕರಣದಲ್ಲಿ ನಟ ದ್ವಾರಕೀಶ್ ಸಂಕಷ್ಟ ಎದುರಾಗಿದೆ. ಹಣ ಕಟ್ಟಬೇಕು. ಇಲ್ಲ ಒಂದು ವರ್ಷ ಜೈಲು ವಾಸ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು, [ಡಿ.10] ಚೆಕ್ ಬೌನ್ಸ್ ಪ್ರಕರಣದಲ್ಲಿ ನಟ ದ್ವಾರಕೀಶ್ ಸಂಕಷ್ಟ ಎದುರಾಗಿದೆ.

52 ಲಕ್ಷದ 20 ಸಾವಿರ ರೂಪಾಯಿ ನೀಡಿ, ಹಣ ನೀಡಲು ವಿಫಲವಾದಲ್ಲಿ 1 ವರ್ಷ ಜೈಲು ವಾಸ ಎಂದು 25ನೇ ಎಸಿಎಂಎಂ ಕೋರ್ಟ್ ಆದೇಶ ಹೊಡರಡಿಸಿದೆ.

ಚಾರುಲತಾ ಸಿನಿಮಾ ನಿರ್ಮಾಣಕ್ಕಾಗಿ ನಿರ್ಮಾಪಕ  ಕೆ.ಸಿ.ಎನ್. ಚಂದ್ರಶೇಖರ್ ಎನ್ನುವರಿಂದ ದ್ವಾರಕೀಶ್ 50 ಲಕ್ಷ ಸಾಲ ಪಡೆದಿದ್ದರು. ಬಳಿಕ ದ್ವಾರಕೀಶ್ ಅವರು ಚಂದ್ರಶೇಖರ್ ಗೆ ಮರಳಿ 52 ಲಕ್ಷ ರೂಪಾಯಿ ಆಂಧ್ರ ಬ್ಯಾಂಕ್ ನ ಚೆಕ್ ನೀಡಿದ್ದರು.

ಆದ್ರೆ ದ್ವಾರಕೀಶ್ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಇದ್ರಿಂದ 5 ವರ್ಷಗಳ ಹಿಂದೆ ನಿರ್ಮಾಪಕ  ಚಂದ್ರಶೇಖರ್ ಕೋರ್ಟ್ ಮೆಟ್ಟಿಲೇರಿದ್ದರು.

ಇಂದು [ಸೋಮವಾರ] ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು 25ನೇ ಎಸಿಎಂಎಂ ನ್ಯಾಯಾಲಯವು, ಸಾಲವಾಗಿ ಪಡೆದಿದ್ದ ಹಣವನ್ನು ನೀಡುವಂತೆ ದ್ವಾರಕೀಶ್ ಗೆ ತಾಕೀತು ಮಾಡಿದೆ.

ಪಡೆದಿರುವ 52 ಲಕ್ಷದ 20 ಸಾವಿರ ರೂಪಾಯಿ ನೀಡಲು ಆಗದಿದ್ದಲ್ಲಿ ಒಂದು ವರ್ಷ ಜೈಲು ಎಂದು ಹೇಳಿ ಆದೇಶ ನೀಡಿದೆ. ಇದ್ರಿಂದ ದ್ವಾರಕೀಶ್ ಬೇರೆ ದಾರಿ ಇಲ್ಲದೆ ಪಡೆದ ಹಣ ಮರುಪಾವತಿ ಮಾಡಲೇಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಬೀಡಿಗೆ ಫಿದಾ ಆದ ರಷ್ಯನ್ನರು, ಒಂದು ಪ್ಯಾಕೆಟ್‌ ಇಷ್ಟು ದುಬಾರಿನಾ?
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!