ರೆಸಾರ್ಟ್ ವೀಕ್ಷಣೆ ನಂತರ ಸತೀಶ್‌ ಜಾರಕಿಹೊಳಿ-ರಾಮುಲು ರಹಸ್ಯ ಭೇಟಿ

Published : Dec 10, 2018, 07:00 PM ISTUpdated : Dec 10, 2018, 07:05 PM IST
ರೆಸಾರ್ಟ್ ವೀಕ್ಷಣೆ ನಂತರ ಸತೀಶ್‌ ಜಾರಕಿಹೊಳಿ-ರಾಮುಲು ರಹಸ್ಯ ಭೇಟಿ

ಸಾರಾಂಶ

ಒಂದು ಕಡೆ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಿದ್ದರೆ ಇನ್ನೊಂದು ಕಡೆ ವಿವಿಧ ಪಕ್ಷಗಳ ನಾಯಕರು ಭೇಟಿ ಮಾಡುತ್ತಿರುವುದು ರಾಜಕಾರಣದಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಇದೆಲ್ಲದಕ್ಕೆ ಸೋಮವಾರದ ಬೆಳವಣಿಗೆಯೇ ಸಾಕ್ಷಿ..

ಬೆಳಗಾವಿ[ಡಿ.10] ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಇನ್ನೊಂದು ಕಡೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಶ್ರೀರಾಮುಲು ಭೇಟಿಯಾಗಿ ರಹಸ್ಯ ಚರ್ಚೆ ನಡೆಸಿದ್ದಾರೆ.  ಕೆಲ ದಿನಗಳ ಹಿಂದೆ ಇದೇ ಸತೀಶ್ ಜಾರಕಿಹೊಳಿ ರೆಸಾರ್ಟ್ ನೋಡಿಕೊಂಡು ಬಂದು ಮಾತನಾಡಿದ್ದರು.

ರೆಸಾರ್ಟ್‌ಗೆ ಹೋಗಿ ಬಂದಿದ್ದೇನೆ! ಜಾರಕಿಹೊಳಿ ಹೊಸ ಬಾಂಬ್

ಸಚಿವ ಸಂಪುಟ ವಿಸ್ತರಣೆ ಡಿಸೆಂಬರ್‌ 22 ಕ್ಕೆ ಮಾಡಲಾಗುವುದು ಎಂದು ಹೇಳಿರುವ ದೋಸ್ತಿ ಸರ್ಕಾರದ ಪ್ರಮುಖರು ಯಾರಿಗೆ ಸಂಪುಟದಲ್ಲಿ ಸ್ಥಾನ ಎಂಬ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಆಪರೇಶನ್ ಕಮಲ ತಡೆಯುವ ಇರಾದೆ ಇದರ ಹಿಂದೆ ಇದೆಯಾದರೂ ಪ್ರಮುಖ ನಾಯಕರ ಭೇಟಿ ಮತ್ತು ರಹಸ್ಯ ಚರ್ಚೆ ಹೊಸ ಬೆಳವಣಿಗೆಗೆ ಅವಕಾಶ ಮಾಡಿಕೊಡಲೂಬಹುದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ