
ಮೈಸೂರು, [ಸೆ.24]: ಅಪಘಾತವಾದ ಬಳಿಕ ಮಾಯಾವಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಕೊನೆಗೂ ಪತ್ತೆಯಾಗಿದೆ. ಶ್ರೀರಂಗಪಟ್ಟಣದಲ್ಲಿರುವ ದರ್ಶನ್ ಅವರ ಸ್ನೇಹಿತನ ತೋಟದಲ್ಲಿ ಪತ್ತೆಯಾಗಿದ್ದು, ವಿ.ವಿ. ಪುರಂ ಸಂಚಾರಿ ಪೊಲೀಸ್ ಠಾಣೆಗೆ ತರಲಾಗಿದೆ.
ದರ್ಶನ್ ಕಾರು ಅಪಘಾತ ಕೇಸ್ ಗೆ ಟ್ವಿಸ್ಟ್
ಇಂದು [ಸೋಮವಾರ] ನಸುಕಿನ ಜಾವ ಸಂಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರ್ ಅಪಘಾತಕ್ಕೀಡಾಗಿತ್ತು. ಆದರೆ, ಅಪಘಾತದ ಸ್ಥಳದಿಂದ ಕಾರು ಮಯಾವಾಗಿತ್ತು. ಅಷ್ಟೇ ಅಲ್ಲದೇ ಪೊಲೀಸರು ಸಹ ಕಾರಿನ ಬಗ್ಗೆ ಅಥವಾ ಅಪಘಾತದ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ದರ್ಶನ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ : ಕೊಲಂಬಿಯಾ ಆಸ್ಪತ್ರೆ ಸ್ಪಷ್ಟನೆ
ಇದ್ರಿಂದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಅಪಘಾತ ಸ್ಥಳದಿಂದ ಕಾರನ್ನು ಯಾರು ತೆಗೆದುಕೊಂಡು ಹೋದ್ರು? ಯಾತಕ್ಕಾಗಿ ಕಾರನ್ನು ಬಚ್ಚಿಡಲಾಗಿತ್ತು? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಸದ್ಯ ಕಾರು ಮೈಸೂರಿನ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಿಂತಿದ್ದು, ಆರ್ಟಿಓ ಅಧಿಕಾರಿಗಳು ಬಂದ ಬಳಿಕ ಕಾರಿನ ಪರಿಶೀಲನೆ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದರ್ಶನ್ ಕಾರ್ ಆ್ಯಕ್ಸಿಂಡೆಂಟ್ ನ ಸುದ್ದಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.