ಆ್ಯಸಿಡ್ ದಾಳಿಯಲ್ಲಿ ಸೌಂದರ್ಯ ಕಳೆದುಕೊಂಡಾಕೆ ಪ್ಯಾಶನ್ ಶೋನಲ್ಲಿ ಭಾಗವಹಿಸಿದಳು

Published : Sep 25, 2016, 01:34 AM ISTUpdated : Apr 11, 2018, 01:13 PM IST
ಆ್ಯಸಿಡ್ ದಾಳಿಯಲ್ಲಿ ಸೌಂದರ್ಯ ಕಳೆದುಕೊಂಡಾಕೆ ಪ್ಯಾಶನ್ ಶೋನಲ್ಲಿ ಭಾಗವಹಿಸಿದಳು

ಸಾರಾಂಶ

ಆ್ಯಸಿಡ್ ದಾಳಿಗೆ ಒಳಗಾಗಿ ಮುಖ ಸಂಪೂರ್ಣವಾಗಿ ಸುಟ್ಟುಹೋಗಿ ವಿಕಾರವಾಗಿದ್ದ ರೇಷ್ಮಾ ಖುರೇಶಿ ಇಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ನ್ಯೂಯಾರ್ಕ್ (ಸೆ.25): 2014 ಮೇ ತಿಂಗಳು ಮುಂಬೈನಿಂದ ಅಲಹಾಬಾದ್ ನಗರಕ್ಕೆ ಪ್ರಯಾಣ ಮಾಡುವಾಗ ತನ್ನ ತಂಗಿಯ ಪತಿ ಮತ್ತು ಮೂವರು ಪುರುಷರಿಂದ ಆ್ಯಸಿಡ್ ದಾಳಿಗೆ ಒಳಗಾಗಿ ಮುಖ ಸಂಪೂರ್ಣವಾಗಿ ಸುಟ್ಟುಹೋಗಿ ವಿಕಾರವಾಗಿದ್ದ ರೇಷ್ಮಾ ಖುರೇಶಿ ಇಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಆ್ಯಸಿಡ್ ದಾಳಿಯ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಎಲ್ಲರೂ ಊಹಿಸಿದ್ದರು ಆದರೆ ಆಕೆಗೆ ಮುಂಬೈನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಈಗ ಆಕೆಯ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ರೇಷ್ಮಾ ಖುರೇಶಿ ಆ್ಯಸಿಡ್ ದಾಳಿಗೆ ಒಳಗಾಗಿ ಸೌಂದರ್ಯ ಕಳೆದುಕೊಂಡು ವಿಕಾರವಾಗಿದ್ದಳು, ಅ್ಯಸಿಡ್ ದಾಳಿಯಲ್ಲಿ ಆಕೆಯ ಒಂದು ಕಣ್ಣು ಸಂಪೂರ್ಣ ಹೊರಟುಹೋಗಿತ್ತು. ಆದರೆ ಆಕೆ ಎದೆಗುಂದದೆ ಇತ್ತೀಚೆಗೆ ನ್ಯಾಯಾರ್ಕ್ ನಲ್ಲಿ ನಡೆದ ಪ್ಯಾಷನ್ ಶೋನಲ್ಲಿ ಭಾಗವಹಿಸಿದ್ದಾಳೆ. ಪ್ಯಾಷನ್ ಶೋನಲ್ಲಿ ಬಿಳಿಯ ಬಣ್ಣದ ನಿಲುವಂಗಿ ತೊಟ್ಟು ನೆಡೆದು ಬರುತ್ತಿದ್ದ ಆಕೆಯನ್ನು ನೋಡಿ ಜನ ಚಪ್ಪಳೆ ತಟ್ಟಿ ಪ್ರೋತ್ಸಾಹ ನೀಡಿದರು.

ಈಗ ರೇಷ್ಮಾ ಖುರೇಶಿ ತನ್ನಂತೆ ಆ್ಯಸಿಡ್ ದಾಳಿಗೆ ಒಳಗಾಗಿ ನೊಂದವರಿಗೆ ಸಾಂತ್ವಾನ ನೀಡುವ ಕೆಲಸ ಮಾಡುತ್ತಿದ್ದಾರೆ. ನಾನು ಪ್ರೀತಿಸುವುದು ಚರ್ಮವನ್ನಲ್ಲ ಎಂದು ಹೇಳುವ ಅವರು ಇಂತಹ ದಾಳಿಯ ಆಕ್ರಮಣದ ವಿರುದ್ಧ ಧ್ವನಿ ಎತ್ತುವ ಸಲುವಾಗಿ ಒಂದು ಲಾಭರಹಿತವಾದ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರಧಿ ಮಾಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?