ಸರ್ಜಿಕಲ್ ದಾಳಿ: ಸಂಜಯ್ ನಿರುಪಮ್ ಹೇಳಿಕೆಯನ್ನು ಖಂಡಿಸಿದ ಅಬು ಆಝ್ಮಿ

Published : Oct 05, 2016, 05:26 AM ISTUpdated : Apr 11, 2018, 01:09 PM IST
ಸರ್ಜಿಕಲ್ ದಾಳಿ: ಸಂಜಯ್ ನಿರುಪಮ್ ಹೇಳಿಕೆಯನ್ನು ಖಂಡಿಸಿದ ಅಬು ಆಝ್ಮಿ

ಸಾರಾಂಶ

ಮುಂಬೈ (ಅ.05): ಸರ್ಜಿಕಲ್ ದಾಳಿ ಬಗ್ಗೆ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ನೀಡಿರುವ ಹೇಳಿಕೆಯನ್ನು ಸಮಾಜವಾದಿ ಪಕ್ಷ ನಾಯಕ ಅಬು ಆಝ್ಮಿ ಖಂಡಿಸಿದ್ದಾರೆ.

ಸಂಜಯ್ ನಿರುಪಮ್ ನೀಡಿರುವ ಹೇಳಿಕೆಯು ಯೋಧರ ಹಾಗೂ ಸೇನೆಯ ಅತ್ಮವಿಶ್ವಾಸಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ ಎಂದು ಅಬು ಆಝ್ಮಿ ಹೇಳಿದ್ದಾರೆ.

ಸರ್ಜಿಕಲ್ ದಾಳಿಯ ವಿಚಾರದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಬೆಂಬಲಿಸುತ್ತಾರೆ; ಸಂಜಯ್ ನಿರುಪಮ್ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ, ಒಂದೇ ಪಕ್ಷದಿಂದ ಎರಡು ರೀತಿಯ ಹೇಳಿಕೆಗಳು ಬರಬಾರದು ಎಂದು ಆಝ್ಮಿ ಹೇಳಿದ್ದಾರೆ.

ಸರ್ಜಿಕಲ್ ದಾಳಿ ನಡೆದಿರುವ ಬಗ್ಗೆ ಎನ್’ಡಿಏ ಸರ್ಕಾರವು ಪುರಾವೆ ಒದಗಿಸಬೇಕೆಂದು ಸಂಜಯ್ ನಿರುಪಮ್ ಹೇಳಿಕೆ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!