ಕಾಶ್ಮೀರ ಪಡೆಯುವ ವ್ಯರ್ಥ ಪ್ರಯತ್ನಗಳನ್ನು ಕೈಬಿಡಿ: ವಿಶ್ವಸಂಸ್ಥೆಯಲ್ಲಿ ಅಕ್ಬರುದ್ದೀನ್

By Web DeskFirst Published Oct 6, 2016, 2:36 AM IST
Highlights

ನ್ಯೂಯಾರ್ಕ್ (ಅ.06): ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ, ಅದನ್ನು ಪಡೆಯುವ ವ್ಯರ್ಥ ಪ್ರಯತ್ನಗಳನ್ನು ಕೈಬಿಡಿ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಆಗಿರುವ ಸೈಯದ್ ಅಕ್ಬರುದ್ದೀನ್ ಪಾಕಿಸ್ತಾನಕ್ಕೆ ಹೇಳಿದ್ದಾರೆ.

ಹತ್ತು ದಿನಗಳ ಹಿಂದೆ ಜನರಲ್ ಅಸೆಂಬ್ಲಿ ಹಾಲ್’ನಲ್ಲಿ ನಡೆದ ಸಭೆಯಲ್ಲೂ ಪಾಕಿಸ್ತಾನದ ಆಧಾರರಹಿತ ವಾದಗಳಿಗೆ ಯಾವುದೇ ಬೆಂಬಲ ಸಿಗಲಿಲ್ಲ ಎಂಬುವುದನ್ನು ನೆನಪಿಸಿದ ಅಕ್ಬರುದ್ದೀನ್, “ಆ ವಿಚಾರದಲ್ಲಿ ಹೆಚ್ಚು ಹೇಳುವ ಅಗತ್ಯವಿಲ್ಲ, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ, ಅದನ್ನು ಪಡೆಯುವ ವ್ಯರ್ಥ ಪ್ರಯತ್ನಗಳನ್ನು ಕೈಬಿಡಿ” ಎಂದು ಹೇಳಿದ್ದಾರೆ.

click me!