ಆಧಾರ್ ಕಾರ್ಡ್'ನಿಂದ ತೆರಿಗೆ ವಂಚನೆಯ ನಿಯಂತ್ರಣ ಸಾಧ್ಯ: ಕೇಂದ್ರ ಸರಕಾರ

Published : Mar 22, 2017, 02:56 PM ISTUpdated : Apr 11, 2018, 01:00 PM IST
ಆಧಾರ್ ಕಾರ್ಡ್'ನಿಂದ ತೆರಿಗೆ ವಂಚನೆಯ ನಿಯಂತ್ರಣ ಸಾಧ್ಯ: ಕೇಂದ್ರ ಸರಕಾರ

ಸಾರಾಂಶ

108 ಕೋಟಿ ಜನರನ್ನು ತಲುಪಿರುವ ತಂತ್ರಜ್ಞಾನ ಇರುವಾಗ, ಹಾಗೂ ತೆರಿಗೆ ಪಾವತಿಸುವ ಎಲ್ಲಾ ಮನೆಯವರೂ ಅದನ್ನು ಹೊಂದಿರುವಾಗ ಐಟಿ ರಿಟರ್ನ್ ಫೈಲ್ ಮಾಡುವಾಗ ಯಾಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬಾರದು?

ನವದೆಹಲಿ(ಮಾ. 22): ಸುಪ್ರೀಂಕೋರ್ಟ್ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೇಂದ್ರ ಸರಕಾರವು ವಿವಿಧ ಕಾರ್ಯಗಳಿಗೆ ಆಧಾರ್ ಕಾರ್ಡ್'ನ್ನು ಕಡ್ಡಾಯ ಮಾಡುವ ಚಿಂತನೆ ನಡೆಸಿದೆ. ಆದಾಯ ತೆರಿಗೆ (ಐಟಿ ರಿಟರ್ನ್) ಪಾವತಿ ಮಾಡುವಾಗ ಮತ್ತು ಪಾನ್ ಕಾರ್ಡ್'ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ಸರಕಾರ ಮುಂದಾಗಿದೆ. ಇದರಿಂದ ತೆರಿಗೆ ವಂಚನೆ ಪ್ರಮಾಣವನ್ನು ಗಮನಾರ್ಹವಾಗಿ ನಿಯಂತ್ರಿಸಬಹುದು ಎಂಬುದು ಕೇಂದ್ರದ ಅನಿಸಿಕೆಯಾಗಿದೆ.

"ಆಧಾರ್ ಕಾರ್ಡ್'ನಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇದ್ದು, ದುರ್ಬಳಕೆಯ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ದೇಶದಲ್ಲಿ ಇಷ್ಟು ತಂತ್ರಜ್ಞಾನ ಬಳಕೆಯಲ್ಲಿರುವಾಗ ಯಾಕೆ ಅದರ ವಿರುದ್ಧ ವ್ಯಗ್ರವಾಗಿರಬೇಕು? ತೆರಿಗೆ ವಂಚನೆ ನಿಗ್ರಹ ಕಾರ್ಯದಲ್ಲಿ ಉಪಯುಕ್ತವಾಗಿರುವ ಆಧಾರ್'ನಿಂದ ದೇಶಕ್ಕೆ ಪ್ರಯೋಜನವಿದೆ. ಅದನ್ನು ಅನುಷ್ಠಾನಗೊಳಿಸುವುದು ಸರಿ ಎಂಬುದು ಸರಕಾರದ ಭಾವನೆ," ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಆಧಾರ್ ಕಾರ್ಡ್ ಕಡ್ಡಾಯವಾಗಬಾರದು. ಕೇಂದ್ರವು ಬಲವಂತವಾಗಿ ಆಧಾರ್ ಕಾರ್ಡನ್ನು ಜನರಿಗೆ ಹೇರುತ್ತಿದೆಯಾ? ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಸರಕಾರದ ಉದ್ದೇಶವನ್ನು ಒಪ್ಪಿಕೊಂಡಿದ್ದಾರೆ. "ನಾವು ಆಧಾರ್ ಕಾರ್ಡನ್ನು ಜನರಿಗೆ ಬಲವಂತವಾಗಿ ಹೇರಬೇಕಾಗಿದೆ. 108 ಕೋಟಿ ಜನರನ್ನು ತಲುಪಿರುವ ತಂತ್ರಜ್ಞಾನ ಇರುವಾಗ, ಹಾಗೂ ತೆರಿಗೆ ಪಾವತಿಸುವ ಎಲ್ಲಾ ಮನೆಯವರೂ ಅದನ್ನು ಹೊಂದಿರುವಾಗ ಐಟಿ ರಿಟರ್ನ್ ಫೈಲ್ ಮಾಡುವಾಗ ಯಾಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬಾರದು?" ಎಂಬುದು ಜೇಟ್ಲಿ ಉತ್ತರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ