
ಹಾಸನ(ಜ.27): ಜಮ್ಮು ಕಾಶ್ಮೀರದ ಸೋನ್ ಬರ್ಗ್'ನಲ್ಲಿ ಹಿಮಪಾತ ದುರಂತದಲ್ಲಿ ಹಾಸನದ ಯೋಧ ಸಂದೀಪ್ ಕುಮಾರ್ ಹುತಾತ್ಮರಾಗಿದ್ದಾರೆ.
24 ವರ್ಷದ ಕನ್ನಡಿಗ ಯೋಧ ಸಂದೀಪ್ ಕುಮಾರ್ ಹಾಸನದ ಶಾಂತಿಗ್ರಾಮ ಹೋಬಳಿ ದೇವಿಹಳ್ಳಿಯವರು. ಮೊನ್ನೆ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸೇನಾ ಬಂಕರ್'ನೊಳಗೆ ಸಿಲುಕಿ 11 ಮಂದಿ ಯೋಧರು ಸಾವನ್ನಪ್ಪಿದ್ದರು. ಇವರಲ್ಲಿ ಯೋಧ ಸಂದೀಪ್ ಕುಮಾರ್ ಕೂಡಾ ಒಬ್ಬರು.
ಫೆಬ್ರವರಿ 22ರಂದು ಸಂದೀಪ್ ಮದುವೆ ನಿಶ್ಚಯವಾಗಿತ್ತು. ಆದರೆ ಇದೀಗ ದುರಂತದಲ್ಲಿ ಯೋಧ ಹುತಾತ್ಮರಾಗಿದ್ದು, ಇವರ ವೀರ ಮರಣದಿಂದ ಗ್ರಾಮದಲ್ಲಿಡೀ ಶೋಕ ಮಡುಗಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.