
ಮಂಗಳೂರು(ಅ.04): ಮತ್ತೊಂದು ಮಹತ್ವದ ಹೆಜ್ಜೆಯತ್ತ ಶ್ರೀಕ್ಷೇತ್ರ ಧರ್ಮಸ್ಥಳ ಮುಂದಾಗಿದೆ. ಸಿನಿಮಾ ಮೂಲಕ ಜನರನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಪ್ರಯತ್ನಕ್ಕೆ ಕೈಹಾಕಿದೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಸಮಾಜದಲ್ಲಿ ನಡೆದಿರುವ ಸಾಮಾಜಿಕ ಕಾರ್ಯಗಳನ್ನು ಸಿನಿಮಾದ ಮೂಲಕ ಜನರಿಗೆ ತಿಳಿಸುವ ಉದ್ದೇಶ ಈ ಸಿನಿಮಾದಲ್ಲಿ ಇದೆ. ಕಾನೂರಾಯಣ್ಣ ಎನ್ನುವ ಹೆಸರಿನ ಚಲನಚಿತ್ರವನ್ನ ಜನರ ಮುಂದೇ ಇಡಲು ಈಗಾಗಲೇ ಭರದಿಂದ ಚಿತ್ರೀಕರಣ ನಡೆಸಲಾಗುತ್ತಿದೆದೆ. ವಿಶೇಷ ಅಂದರೆ, ಕಾನೂರಾಯಣ್ಣ ಚಿತ್ರಕ್ಕೆ ಸುಮಾರು 20 ಲಕ್ಷ ಮಂದಿ 20 ರೂ ನಂತೆ ಹಣವನ್ನ ನೀಡಿದ್ದಾರೆ.
ಚಿತ್ರವನ್ನ ಟಿ.ಎಸ್.ನಾಗಭರಣ ಅವರು ನಿರ್ದೇಶನ ಮಾಡ್ತಿದ್ದು, ಹಲವು ಪ್ರಮುಖರು ಅಭಿನಯಿಸಿದ್ದಾರೆ. ಇನ್ನು, ಈ ಚಿತ್ರೀಕರಣವನ್ನ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವೀಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.