ಕೆಂಪು ಉಗ್ರರ ಅಟ್ಟಹಾಸಕ್ಕೆ ಹುತಾತ್ಮರಾದ ಒಂಬತ್ತು ಸಿಆರ್‌ಪಿಎಫ್ ಯೋಧರು

Published : Mar 13, 2018, 03:44 PM ISTUpdated : Apr 11, 2018, 12:34 PM IST
ಕೆಂಪು ಉಗ್ರರ ಅಟ್ಟಹಾಸಕ್ಕೆ ಹುತಾತ್ಮರಾದ ಒಂಬತ್ತು ಸಿಆರ್‌ಪಿಎಫ್ ಯೋಧರು

ಸಾರಾಂಶ

ಕೆಂಪು ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು,  ಛತ್ತೀಸ್‌ಗಢ್‌ನ ಬಸ್ತರ್ ವಿಭಾಗದ ಸುಕ್ಮಾ ಜಿಲ್ಲೆಯಲ್ಲಿ ಇವರ ದಾಳಿಗೆ ಒಂಬತ್ತು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ 10 ಯೋಧರು ಗಾಯಗೊಂಡಿದ್ದಾರೆ.

ಹೊಸದಿಲ್ಲಿ: ಕೆಂಪು ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು,  ಛತ್ತೀಸ್‌ಗಢ್‌ನ ಬಸ್ತರ್ ವಿಭಾಗದ ಸುಕ್ಮಾ ಜಿಲ್ಲೆಯಲ್ಲಿ ಇವರ ದಾಳಿಗೆ ಒಂಬತ್ತು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ 10 ಯೋಧರು ಗಾಯಗೊಂಡಿದ್ದಾರೆ.

ಕೂಂಬಿಂಗ್ ಕಾರ್ಯಾಚರಣೆ ವೇಳೆ, ಯೋಧರ ಮೈನ್ ಪ್ರೊಟೆಕ್ಟಿವ್ ವಾಹನಕ್ಕೆ ಬೆಂಕಿ ಹಚ್ಚಿದ ನಕ್ಸಲರು ಈ ಕೃತ್ಯವೆಸಗಿದ್ದಾರೆ. 212ನೇ ಬ್ಯಾಟಲೀಯನ್‌ನ ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಯೋಧರು ಕೂಂಬಿಂಗ್ ಕಾರ್ಯದಲ್ಲಿ ತೊಡಗಿದ್ದರು. ಬೆಳಗ್ಗೆ 8 ಗಂಟೆಗೆ ನಡೆದ ಕಾರ್ಯಾಚರಣೆ ವೇಳೆ ಓಡಿ ಹೋಗಿದ್ದ ನಕ್ಸಲರು, ಮಧ್ಯಾಹ್ನ ಮತ್ತೆ ದಾಳಿ ನಡೆಸಿದ್ದು, ಒಂಬತ್ತು ಯೋಧರು ಹತ್ಯೆಯಾಗಿದ್ದಾರೆ. ಗಾಯಗೊಂಡು ಮೂವರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದಲ್ಲಿ 10 ಶಂಕಿತ ನಕ್ಸಲರನ್ನು ಕೊಂದ 11 ದಿನಗಳಲ್ಲಿಯೇ ಈ ದಾಳಿ ನಡೆದಿದ್ದು, ಆರು ತಿಂಗಳ ಹಿಂದೆ 25 ಸಿಆರ್‌ಪಿಎಫ್ ಜವಾನರನ್ನುಉಗ್ರರು ಕೊಂದಿದ್ದರು. ರಾಜ್ಯದಲ್ಲಿ ಹೆಚ್ಚಾಗಿದ್ದ ನಕ್ಸಲರನ್ನು ಹತ್ತಿಕ್ಕಲ್ಲು ಸರಕಾರ ಸಾಕಷ್ಟು ಯಶಸ್ವಿ ಆಗಿದ್ದು, ಸುಮಾರು 300 ಉಗ್ರರ ಹಟ್ಟುಡಗಿಸುವಲ್ಲಿಯೂ ಯಶಸ್ವಿಯಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಮುಸ್ಲಿಮರು ಸೂರ್ಯ-ನದಿ ಪೂಜಿಸಬೇಕು, RSS ನಾಯಕನ ಹೇಳಿಕೆಯಿಂದ ಚರ್ಚೆ ಶುರು
ದುರಂಧರ್ ಸ್ಟೈಲ್‌ನಲ್ಲಿ ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕಿಸ್ತಾನಿ ಲೇಡಿ ಸ್ಪೈ; ವಿಡಿಯೋ ಭಾರೀ ವೈರಲ್!