
ಶ್ರೀನಗರ(ಮೇ.28): ಕಾಶ್ಮೀರದಲ್ಲಿ ಬಂದ್ ಇದ್ದರೂ ವಿವಿಧ ಹುದ್ದೆಗಳಿಗೆ ಭಾರತೀಯ ಸೇನೆ ಕರೆದಿದ್ದ ಪರೀಕ್ಷೆಗೆ 815 ಮಂದಿಯಲ್ಲಿ ಸುಮಾರು 800 ಮಂದಿ ಹಾಜರಾಗಿರುವುದು ಅಚ್ಚರಿ ಮೂಡಿಸಿದೆ.
ಸೇನೆಯು ಹಿಜ್ಬುಲ್ ಮುಜಾಯಿದ್ದೀನ್ ಭಯೋತ್ಪಾಕ ಸಂಘಟನೆಯ ಸಬ್ಜರ್ ಭಟ್ ಹತ್ಯೆಯ ಹಿನ್ನಲೆಯಲ್ಲಿ ಕಾಶ್ಮೀರ ಬಂದ್'ಗೆ ಕರೆ ನೀಡಲಾಗಿತ್ತು. ಈ ಅಭ್ಯರ್ಥಿ'ಗಳು ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಈ ಮೊದಲು ಉತ್ತೀರ್ಣ'ರಾಗಿದ್ದರು. ಆದರೆ ಬಂದ್ ಇದ್ದರೂ 815 ಪರೀಕ್ಷಾರ್ಥಿ'ಗಳಲ್ಲಿ 799 ಮಂದಿ ಹಾಜರಾಗಿರುವುದು ಸೇನೆಗೆ ಸಂತಸ ಮೂಡಿಸಿದೆ.
ಜಮ್ಮು-ಕಾಶ್ಮೀರ ಗಡಿಯಲ್ಲಿನ ಉಗ್ರರ ದಮನಕ್ಕೆ ಭಾರತೀಯ ಸೇನೆ ಹೊಸ ಮಾರ್ಗ ಹುಡುಕಿದ್ದು, ಸ್ಥಳೀಯ ಯುವಕರನ್ನೇ ಸೈನ್ಯಕ್ಕೆ ನೇಮಕಮಾಡಿಕೊಂಡು ಆ ಮೂಲಕ ಉಗ್ರ ಚಟುವಟಿಕೆಗೆಗೆ ಮಟ್ಟಹಾಕಲು ಮುಂದಾಗಿದೆ. ಇದು ಒಂದು ರೀತಿಯಲ್ಲಿ ಆಶಾದಾಯಕ ಬೆಳವಣಿಗೆ ಕೂಡ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.