ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ :ಪಾಕ್ ದಾಳಿಗೆ 8 ನಾಗರಿಕರ ಸಾವು,ಪ್ರತಿದಾಳಿಗೆ ಪಾಕ್'ನ 14 ಚೌಕಿ ಧ್ವಂಸ

Published : Nov 01, 2016, 08:09 AM ISTUpdated : Apr 11, 2018, 12:51 PM IST
ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ :ಪಾಕ್ ದಾಳಿಗೆ  8 ನಾಗರಿಕರ ಸಾವು,ಪ್ರತಿದಾಳಿಗೆ ಪಾಕ್'ನ 14 ಚೌಕಿ ಧ್ವಂಸ

ಸಾರಾಂಶ

ಈ ಸಂದರ್ಭದಲ್ಲಿ  ಭಾರತೀಯ ಯೋಧರು ನಡೆಸಿದ ಪ್ರತಿ ದಾಳಿಗೆ ಪಾಕ್'ನ 14 ಚೌಕಿಗಳನ್ನು ಧ್ವಂಸ ಮಾಡಿದ್ದು ಇಬ್ಬರು ಪಾಕ್ ಯೋಧರು ಸಹ ಹತ್ಯೆಗೀಡಾಗಿದ್ದಾರೆ. ಪಾಕ್ ಸೇನೆಯಲ್ಲಿ ಇನ್ನಷ್ಟು ಸಾವು ನೋವುಗಳಾಗಿರುವ ಸಾಧ್ಯತೆಯಿದೆ.

ಜಮ್ಮು(ನ.1): ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಪಾಕ್ ಇಂದು ಮತ್ತೆ ದಾಳಿ ನಡೆಸಿದ ಪರಿಣಾಮ ನಾಲ್ವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಸಾವಿಗೀಡಾಗಿದ್ದು 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಾಕ್ ಸೈನಿಕರ ದಾಳಿಯಲ್ಲಿ ಒಂದೇ ದಿನ 8 ಮಂದಿ ಹತರಾಗಿರುವುದು 2 ದಶಕದಲ್ಲಿ ಇದೆ ಮೊದಲಾಗಿದೆ.

ಈ ಸಂದರ್ಭದಲ್ಲಿ  ಭಾರತೀಯ ಯೋಧರು ನಡೆಸಿದ ಪ್ರತಿ ದಾಳಿಗೆ ಪಾಕ್'ನ 14 ಚೌಕಿಗಳನ್ನು ಧ್ವಂಸ ಮಾಡಿದ್ದು ಇಬ್ಬರು ಪಾಕ್ ಯೋಧರು ಸಹ ಹತ್ಯೆಗೀಡಾಗಿದ್ದಾರೆ. ಪಾಕ್ ಸೇನೆಯಲ್ಲಿ ಇನ್ನಷ್ಟು ಸಾವು ನೋವುಗಳಾಗಿರುವ ಸಾಧ್ಯತೆಯಿದೆ. ಪರಿಸ್ಥಿತಿ ಗಂಭೀರತೆ ಕುರಿತು ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್.ಎನ್.ವೋಹ್ರಾ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ದಾಳಿ ಹೆಚ್ಚಾಗುವ ಸಾಧಯತೆಯಿರುವುದರಿಂದ ಗಡಿ ಭಾಗದಲ್ಲಿನ 174 ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ.  

ಸೆಪ್ಟೆಂಬರ್  29 ರಂದು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ  ಸರ್ಜಿಕಲ್ ದಾಳಿ ನಡೆಸಿದ ನಂತರ ಪಾಕಿಸ್ತಾನವು ಅಂತರರಾಷ್ಟ್ರೀಯ ಗಡಿಯಲ್ಲಿ 60ಕ್ಕೂ ಹೆಚ್ಚು ಬಾರಿ ಕದನವಿರಾಮ ಉಲ್ಲಂಘಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ