
ಲಖನೌ: ಪೇಂಟಿಂಗ್ ಕೆಲಸದ ಗುತ್ತಿಗೆ ಪಡೆಯಲು ಹೈದರಾಬಾದ್ಗೆ ತೆರಳಬೇಕಿದ್ದ 6 ಹದಿಹರೆಯದವರು ರೈಲು ಗಾಡಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಹಪೂರ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. 14ರಿಂದ 16 ವರ್ಷದೊಳಗಿನ ಸಂತ್ರಸ್ತರು ಕಿವಿಗೆ ಇಯರ್ಫೋನ್ ಹಾಕಿಕೊಂಡಿದ್ದೇ, ಅಪಘಾತಕ್ಕೆ ಸಿಲುಕಲು ಕಾರಣ ಎನ್ನಲಾಗಿದೆ. ಪೇಂಟಿಂಗ್ ಕೆಲಸಕ್ಕಾಗಿ ಹೈದರಾಬಾದ್ಗೆ ತೆರಳಬೇಕಿದ್ದ 7 ಮಂದಿ ಅಪ್ರಾಪ್ತ ಬಾಲಕರು, ತಡವಾಗಿ ಬಂದು ರೈಲು ಗಾಡಿಯನ್ನು ಮಿಸ್ ಮಾಡಿಕೊಂಡಿದ್ದರು.
ಈ ವೇಳೆ ವಾಪಸ್ ಮನೆಯತ್ತ ತೆರಳಲು ರೈಲಿನ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಆಗ ಅವರ ಮೇಲೆ ರೈಲುಗಾಡಿ ಹರಿದಿದ್ದು, 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.