ಈ ಹಳ್ಳಿಯಲ್ಲೀಗ ಎಲ್ಲರೂ ಕೋಟ್ಯಧೀಶರು

Published : Oct 21, 2018, 03:36 PM IST
ಈ ಹಳ್ಳಿಯಲ್ಲೀಗ ಎಲ್ಲರೂ ಕೋಟ್ಯಧೀಶರು

ಸಾರಾಂಶ

ಈ ಹಳ್ಳಿಯಲ್ಲಿ ಇದೀಗ ಎಲ್ಲರೂ ದಿಢೀರ್ ಶ್ರೀಮಂತರಾಗಿದ್ದಾರೆ. ಅವರು ದಿಢೀರ್ ಕೋಟ್ಯಧೀಶರಾಗಲು ಕಾರಣ ಏನು ಗೊತ್ತಾ..? 

ಬೆಂಗಳೂರು :ದೇಶದ ಅತ್ಯಂತ ಹಿಂದುಳಿದ ಈಶಾನ್ಯ ಭಾಗದ ಅರುಣಾಚಲ ಪ್ರದೇಶದ ಒಂದು ಹಳ್ಳಿಯ ಎಲ್ಲಾ ಕುಟುಂಬಗಳಿಗೆ ಭಾರತೀಯ ಸೇನೆಯಿಂದ ಕೋಟಿ ಕೋಟಿ ಹಣ ನೀಡಲಾಗಿದೆ.  ಇದರಿಂದ ಇದೀಗ ಇಲ್ಲಿನ  ಕುಟುಂಬಗಳು ದಿಢೀರನೆ ಕೋಟ್ಯಧಿಪತಿಗಳಾಗಿವೆ.

ಇಲ್ಲಿನ ಬೊಂಬಿಲ ಹಳ್ಳಿಗರಿಗೆ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ಇಲ್ಲಿನ ಪಶ್ಚಿಮ ಕಮೆಂಗ್ ಜಿಲ್ಲೆಯ ಬೊಂಬಿಲ ಹಳ್ಳಿಗೆ 38 ಕೋಟಿ ಹಣವನ್ನು ನೀಡಿದ್ದಾರೆ. 

ಹೌದು, ಭಾರತೀಯ ಸೇನೆಯ ಕೃಪೆಯಿಂದಾಗಿ ಈ ಊರು ಈಗ  ಶ್ರೀಮಂತವಾಗಿದ್ದು, ತಮ್ಮ ಜಮೀನನ್ನು ಚೀನಾ ಹಾಗೂ ಭಾರತ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಗೆ ಬಿಟ್ಟುಕೊಟ್ಟಿದ್ದರಿಂದ ಅದಕ್ಕೆ ಪರಿಹಾರವಾಗಿ ಹಳ್ಳಿಗೆ 38 ಕೋಟಿ ಹಣ ಹಂಚಲಾಗಿದೆ. 

ಹಂತ ಹಂತವಾಗಿ ಇಲ್ಲಿನ ಅನೇಕ ಹಳ್ಳಿಗಳಿಗೆ ಭಾರತೀಯ ಸೇನೆ ಹಣವನ್ನು ಹಂಚಿಕೆ ಮಾಡುತ್ತಿದ್ದು, ಈ ಬಾರಿ ಬೊಂಬಿಲ ಹಳ್ಳಿಗೆ 38 ಕೋಟಿ ಹಣ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನ್ಮ ದಿನದಲ್ಲಿ ಒಮ್ಮೆಯಾದ್ರೂ ಸಂಖ್ಯೆ 1 ಇದ್ಯಾ? ಹಾಗಿದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ- ಎಷ್ಟು ಬಾರಿ ಇದ್ದರೆ ಏನು ಫಲ?
ಅತಿಹೆಚ್ಚು ಮದ್ಯಪಾನ ಮಾಡುವ ಜಗತ್ತಿನ ಸೈನ್ಯ ಯಾವುದು? ಭಾರತದ ಸೇನೆಗೆ ಎಷ್ಟನೇ ಸ್ಥಾನ?