
ಹುಬ್ಬಳ್ಳಿ : ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಉಪ ಚುನಾವಣಾ ಕಣಗಳು ರಂಗೇರಿವೆ.
ಕುಂದಗೋಳ, ಚಿಂಚೋಳಿಯಲ್ಲಿ ಉಪ ಚುನಾವಣಾ ಕಣ ರಂಗೇರಿದ್ದು, ವಿವಿಧ ನಾಯಕರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಳ್ಳರು ಕೂಡ ಚುರುಕಾಗಿದ್ದು, ಚುನಾವಣಾ ಪ್ರಚಾರ ನಡೆಸುತ್ತಿದ್ದ ನಾಯಕರ ಜೇಬಿಗೆ ಕನ್ನ ಹಾಕಿದ್ದಾರೆ.
20 ಶಾಸಕರು ನಮ್ಮೊಟ್ಟಿಗೆ : ಯಡಿಯೂರಪ್ಪ ಯೂ ಟರ್ನ್
ಕುಂದಗೋಳ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ರೋಡ್ ಶೊ ನಡೆಸುತ್ತಿದ್ದ ವೇಳೆ, ಬಿಜೆಪಿ ಮಾಜಿ ಸಚಿವರ ಆಪ್ತನ ಜೇಬಿಗೆ ಕತ್ತರಿ ಹಾಕಲಾಗಿದೆ. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಆಪ್ತ ಸಹಾಯಕ ಅಭಿಜಿತ್ ಜೇಬಿಗೆ ಕತ್ತರಿ ಹಾಕಿದ್ದಾರೆ.
ಪಿಕ್ ಪಾಕೇಟ್ ಮಾಡಿ ವರ ಬಳಿ ಇದ್ದ 50 ಸಾವಿರ ನಗದು ಎಗರಿಸಿದ್ದಾರೆ. ಪೊಲೀಸರೂ ಸ್ಥಳದಲ್ಲಿದ್ದು, ಎದುರಲ್ಲೇ ಕೈ ಚಳಕ ತೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.