ಸಿಎಂ ಉದ್ಘಾಟನೆಗೆ 24 ತಾಸು ಮುನ್ನ ಒಡೆದುಹೋದ ಅಣೆಕಟ್ಟು : 389 ಕೋಟಿ ರೂ. ವ್ಯರ್ಥ

Published : Sep 20, 2017, 06:40 PM ISTUpdated : Apr 11, 2018, 12:53 PM IST
ಸಿಎಂ ಉದ್ಘಾಟನೆಗೆ 24 ತಾಸು ಮುನ್ನ ಒಡೆದುಹೋದ ಅಣೆಕಟ್ಟು : 389 ಕೋಟಿ ರೂ. ವ್ಯರ್ಥ

ಸಾರಾಂಶ

ಇನ್ನು ಡ್ಯಾಂನ ಕೆಲ ಭಾಗ ಒಡೆದುಹೋದ ಕಾರಣ ಅಪಾರ ಪ್ರಮಾಣದ ನೀರು ಪೋಲಾಗಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಹವುಂಟಾಗಿದೆ.

ಪಾಟ್ನಾ(ಸೆ.20): ಬಿಹಾರದ ಪಾಟ್ನಾದಲ್ಲಿ ಉದ್ಘಾಟನೆಗೂ ಮುನ್ನವೇ ಡ್ಯಾಂ ಒಡೆದುಹೋಗಿದೆ. ಇದ್ರಿಂದಾಗಿ ಅಣೆಕಟ್ಟು ನಿರ್ಮಾಣಕ್ಕೆ ಖರ್ಚು ಮಾಡಿದ್ದ 389 ಕೋಟಿ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಇಂದು ಬಿಹಾರ ಸಿಎಂ ನಿತೀಶ್​ ಕುಮಾರ್, ಭಗಲ್ಪುರ ಜಿಲ್ಲೆಯ ಕಹಲ್​ಗಾವ್​ನಲ್ಲಿ ನಿರ್ಮಾಣವಾಗಿರೋ ಡ್ಯಾಂ ಅನ್ನ ಉದ್ಘಾಟನೆ ಮಾಡಬೇಕಿತ್ತು. ಆದರೆ, ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರೋ ಅಣೆಕಟ್ಟಿನ ಕೆಲ ಭಾಗ ಒಡೆದುಹೋದ ವಿಚಾರ ನಿತೀಶ್​ ಗಮನಕ್ಕೆ ಬರುತ್ತಿದ್ದಂತೆ, ಭಗಲ್ಪುರ ಭೇಟಿಯನ್ನ ರದ್ದುಗೊಳಿಸಿದ್ದಾರೆ. ಇನ್ನು ಡ್ಯಾಂನ ಕೆಲ ಭಾಗ ಒಡೆದುಹೋದ ಕಾರಣ ಅಪಾರ ಪ್ರಮಾಣದ ನೀರು ಪೋಲಾಗಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಹವುಂಟಾಗಿದೆ. ಇದರಿಂದ ನಿತೀಶ್​ ಕುಮಾರ್ ಸರ್ಕಾರಕ್ಕೆ ಮುಜುಗರವುಂಟಾಗಿದೆ. ಗತೇಶ್ವರ್ ಪಂಥ್ ಕ್ಯಾನಲ್ ಯೋಜನೆಯ ಭಾಗವಾಗಿದ್ದ ಅಣೆಕಟ್ಟು ಆ ಭಾಗದ ಭೂ ನೀರಾವರಿ ವ್ಯವಸ್ಥೆಯನ್ನು ಬಲ ಪಡಿಸುವಲ್ಲಿ ಸಹಕಾರಿಯಾಗಲಿದೆ ಎನ್ನಲಾಗಿತ್ತು. ಕಹಲ್​ಗಾವ್​ನ ವಸತಿ ಪ್ರದೇಶಗಳಿಗೆ ಅಣೆಕಟ್ಟಿನಿಂದ ಹರಿದು ಬಂದು ನೀರು ನುಗ್ಗಿದ ಕಾರಣ ಪ್ರವಾಹದಂತಹ ಪರಿಸ್ಥಿತಿ ಅಲ್ಲಿ ಉಂಟಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರೀತಿಸಿ ಮದುವೆಯಾದ ಮಗಳ ರಕ್ತದಲ್ಲಿ ಕೈ ತೊಳೆದ ತಂದೆ; ಹುಬ್ಬಳ್ಳಿಯಲ್ಲಿ ಮರ್ಯಾದ ಹ*ತ್ಯೆ
ಹೂವಿನಹಡಗಲಿ: ಕೇಳಿದ್ದು 237 ಕೊಠಡಿ, ಸರ್ಕಾರ ಕೊಟ್ಟಿದ್ದು ಒಂದೇ ಕೊಠಡಿ! ಮಕ್ಕಳ ಶಿಕ್ಷಣಕ್ಕೆ ಇಲ್ವಾ ಬೆಲೆ?