ಪೇದೆ ಕೊಂದಿದ್ದ ಉಗ್ರರನ್ನು ಅಟ್ಟಾಡಿಸಿ ಕೊಂದ ಸೇನೆ!

Published : Jul 22, 2018, 12:18 PM IST
ಪೇದೆ ಕೊಂದಿದ್ದ ಉಗ್ರರನ್ನು ಅಟ್ಟಾಡಿಸಿ ಕೊಂದ ಸೇನೆ!

ಸಾರಾಂಶ

ಪೇದೆ ಸಲೀಂ ಅವರನ್ನು ಕೊಂದಿದ್ದ ಉಗ್ರರು ಮಟಾಷ್ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ ಸಲೀಂ ಹುತಾತ್ಮರಾಗಿ ಒಂದೇ ದಿನದಲ್ಲಿ ಉಗ್ರರ ಬೇಟೆ

ಶ್ರೀನಗರ(ಜು.22): ನಿನ್ನೆಯಷ್ಟೇ ಪೊಲೀಸ್ ಪೇದೆಯೋರ್ವರನ್ನು ಅಪಹರಿಸಿ ಕೊಂದು ಹಾಕಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ನಿನ್ನೆ ಕುಲ್ಗಾಮ್ ಜಿಲ್ಲೆಯಲ್ಲಿ ಪೊಲೀಸ್ ಪೇದೆ ಸಲೀಂ ಅಹ್ಮದ್ ಶಾಹ್ ಅವರನ್ನು ಅಪಹರಿಸಿದ್ದ ಉಗ್ರರು, ಅವರನ್ನು ಕೊಂದು ಹಾಕಿದ್ದರು.

ಪೇದೆ ಸಲೀಂ ಅವರನ್ನು ಕೊಂದಿದ್ದ ಉಗ್ರರ ಬೇಟೆಗೆ ಜಾಲ ಬೀಸಿದ ಸೇನೆ, ಸಲೀಂ ಅವರನ್ನು ಅಪಹರಿಸಿದ್ದ ಸ್ಥಳದಿಂದ ಕೇವಲ ೨ ಕಿ.ಮೀ ದೂರದಲ್ಲಿ ಅವಿತಿದ್ದ ಮೂವರು ಉಗ್ರರನ್ನು ಕೊಂದು ಹಾಕಿದೆ.

ಈ ಕುರಿತು ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಶೇಶ್ ಪಾಲ್ ವೇದ್, ನಮ್ಮ ಸಹೋಧ್ಯೋಗಿ ಸಲೀಂ ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದು ಹಾಕಿದ್ದ ಉಗ್ರರನ್ನು ಅವರು ಸೇರಬೇಕಾದ ಸ್ಥಳಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌
ನಬಾರ್ಡ್‌ ಅನುದಾನ ಕಡಿತದಿಂದ ಕೃಷಿ ಸಾಲ ನೀಡಲು ಸಮಸ್ಯೆ: ಸಿಎಂ ಸಿದ್ದರಾಮಯ್ಯ