ಮಕ್ಕಳ ಕಳ್ಳರೆಂದು ಭಾವಿಸಿ ಕಾಂಗ್ರೆ​ಸ್‌ ನಾಯಕರ ಥಳಿ​ಸಿದ ಗ್ರಾಮ​ಸ್ಥ​ರು!

Published : Jul 28, 2019, 08:47 AM IST
ಮಕ್ಕಳ ಕಳ್ಳರೆಂದು ಭಾವಿಸಿ ಕಾಂಗ್ರೆ​ಸ್‌ ನಾಯಕರ ಥಳಿ​ಸಿದ ಗ್ರಾಮ​ಸ್ಥ​ರು!

ಸಾರಾಂಶ

ಮಕ್ಕಳ ಕಳ್ಳರೆಂದು ಭಾವಿಸಿ ಕಾಂಗ್ರೆ​ಸ್‌ ನಾಯಕರ ಥಳಿ​ಸಿದ ಗ್ರಾಮ​ಸ್ಥ​ರು!| ಮಧ್ಯ​ಪ್ರ​ದೇ​ಶ​ದ ಬೆತುಲ್‌ ಜಿಲ್ಲೆ​ಯಲ್ಲಿ ಭಾನುವಾರ ರಾತ್ರಿ ನಡೆ​ದ ಘಟನೆ

ಭೋಪಾ​ಲ್‌[ಜು.28]: ಕಾಂಗ್ರೆಸ್‌ನ ಮೂವರು ಮುಖಂಡ​ರನ್ನು ಮಕ್ಕಳ ಕಳ್ಳ​ರೆಂದು ಭಾವಿ​ಸಿದ ಗ್ರಾಮ​ಸ್ಥರ ಗುಂಪೊಂದು ಅವ​ರನ್ನು ಹಿಗ್ಗಾ​ಮುಗ್ಗಾ ಥಳಿ​ಸಿದ ಘಟನೆ ಮಧ್ಯ​ಪ್ರ​ದೇ​ಶ​ದ ಬೆತುಲ್‌ ಜಿಲ್ಲೆ​ಯಲ್ಲಿ ಭಾನುವಾರ ರಾತ್ರಿ ನಡೆ​ದಿ​ದೆ. ಧರ್ಮೇಂದ್ರ ಶುಕ್ಲಾ, ಧರ್ಮು​ಸಿಂಗ್‌ ಲಾಂಜೀ​ವರ್‌ ಮತ್ತು ಲಲಿತ್‌ ಬರಾ​ಸ್ಕರ್‌ ಹಲ್ಲೆ​ಗೊ​ಳ​ಗಾ​ದ​ವ​ರು.

ಶನಿ​ವಾರ ರಾತ್ರಿ ನೇವ​ಲ್‌​ಸಿಂಗ್‌ ಗ್ರಾಮದತ್ತ ಮಕ್ಕಳ ಕಳ್ಳರು ಕಾರಿನಲ್ಲಿ ಆಗ​ಮಿ​ಸು​ತ್ತಿ​ದ್ದಾರೆ ಎಂಬ ವದಂತಿ ಹಬ್ಬಿತ್ತು. ಇದನ್ನೇ ನಂಬಿದ ಗ್ರಾಮ​ಸ್ಥರು ಗ್ರಾಮದ ಬಳಿ ರಸ್ತೆ​ಗೆ ಅಡ್ಡ​ವಾಗಿ ಮರ ಕಡಿದು ಹಾಕಿ ಮಕ್ಕಳ ಕಳ್ಳ​ರಿ​ಗಾಗಿ ಕಾಯು​ತ್ತಿ​ದ್ದರು. ಆದರೆ ಅದೇ ವೇಳೆಗೆ ಅಲ್ಲಿಗೆ ಕಾಂಗ್ರೆಸ್‌ ನಾಯ​ಕರು ಕಾರಿ​ನಲ್ಲಿ ಬಂದಿದ್ದು, ಮರ ಕಡಿದು ರಸ್ತೆ ಅಡ್ಡ ಹಾಕಿ​ದ್ದನ್ನು ಡಕಾ​ಯಿ​ತರ ಕೃತ್ಯ ಇರ​ಬ​ಹುದು ಎಂದು ಅಂದಾ​ಜಿ​ಸಿ ಅಲ್ಲಿಂದ ತಮ್ಮ ಕಾರು ಹಿಂದಿ​ರು​ಗಿ​ಸಿ​ಕೊಂಡು ವಾಪಸ್‌ ಹೊರ​ಟಿ​ದ್ದರು.

ಆದರೆ ಇವ​ರನ್ನು ಬೆನ್ನ​ಟ್ಟಿದ ಗ್ರಾಮ​ಸ್ಥರು ಅವರ ಕಾರನ್ನು ಜಖಂಗೊ​ಳಿಸಿ ಮೂವರೂ ನಾಯ​ಕ​ರನ್ನು ಥಳಿ​ಸಿ​ದ್ದಾರೆ. ನಂತರ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಆಗ​ಮಿ​ಸಿದ ಪೊಲೀ​ಸರು ಇವ​ರನ್ನು ಆಸ್ಪ​ತ್ರೆಗೆ ದಾಖ​ಲಿ​ಸಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ