22 ಕೆಎಎಸ್ ಅಧಿಕಾರಿಗಳ ವರ್ಗಾವಣೆ

Published : Aug 09, 2018, 09:21 AM IST
22 ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಸಾರಾಂಶ

ರಾಜ್ಯ ಸರ್ಕಾರವು 22 ಕೆಎಎಸ್ ಅಧಿಕಾರಿಗಳನ್ನು ಮತ್ತು ಇಬ್ಬರು ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಿ ಬುಧವಾರ ವರ್ಗಾವಣೆಗೊಳಿಸಿಸಿದೆ.

ಬೆಂಗಳೂರು: ರಾಜ್ಯ ಸರ್ಕಾರವು 22 ಕೆಎಎಸ್ ಅಧಿಕಾರಿಗಳನ್ನು ಮತ್ತು ಇಬ್ಬರು ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಿ ಬುಧವಾರ ವರ್ಗಾವಣೆಗೊಳಿಸಿಸಿದೆ. ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಅವರಿಗೆ ಮಲೆ ಮಹದೇಶ್ವರ ಸ್ವಾಮಿ ಪ್ರಾಧಿಕಾರದ ಕಾರ್ಯದರ್ಶಿ ಹುದ್ದೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಹಾಸನ) ವಿಶೇಷ ಭೂಸ್ವಾಧೀನಾಧಿಕಾರಿ ಜಿ.ಎನ್.ಮಂಜುನಾಥ್ ಅವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೊನ್ನವಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯನ್ನು ಹೆಚ್ಚುವರಿಯಾಗಿ ಜವಾಬ್ದಾರಿ ವಹಿಸಲಾಗಿದೆ. 

ವರ್ಗಾವರ್ಗಿ ಪಟ್ಟಿ: ಕೆ. ವಿದ್ಯಾಕುಮಾರಿ- ಹೆಚ್ಚುವರಿ ಜಿಲ್ಲಾಧಿಕಾರಿ, ಉಡುಪಿ. ಸಂಗಪ್ಪ- ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ. ಎನ್.ಚಂದ್ರಶೇಖರ್ - ಸರ್ಕಾರದ ಉಪಕಾರ್ಯದರ್ಶಿ 2, ನಗರಾಭಿವೃದ್ಧಿ ಇಲಾಖೆ. ಡಾ.ರುದ್ರೇಶ್ ಎಸ್ ಘಾಳಿ- ಹೆಚ್ಚುವರಿ ಜಿಲ್ಲಾಧಿಕಾರಿ, ಬೀದರ್. ಹರ್ಷ ಎಸ್.ಶೆಟ್ಟಿ-ಕೌನ್ಸಿಲ್  ಸೆಕ್ರೆಟರಿ, ಕಲಬುರಗಿ ಮಹಾನಗರ ಪಾಲಿಕೆ. ಉದಯ ಕುಮಾರ್ ಶೆಟ್ಟಿ- ಉಪ ಆಯುಕ್ತ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಬೆಂಗಳೂರು. ಎ. ದೇವರಾಜು-ವಿಶೇಷ ಭೂಸ್ವಾಧೀನಾ ಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೈಸೂರು. ಕೆ.ಎಂ.ಸುರೇಶ್ ಕುಮಾರ್-ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ.  ವಿಜಯಕುಮಾರ್ ಹೊನಕೇರಿ-ವಿಶೇಷ ಭೂಸ್ವಾಧೀನಾಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಲಬುರಗಿ. ಬಿ. ಆರ್.ರೂಪಾ- ಉಪವಿಭಾಗಾಧಿಕಾರಿ, ತರೀಕೆರೆ, ಚಿಕ್ಕಮಗಳೂರು. ಡಾ.ನಾಗೇಂದ್ರ ಎಫ್. ಹೊನ್ನಳ್ಳಿ- ಮುಖ್ಯ ಆಡಳಿತಾಧಿ ಕಾರಿ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಶಿವಮೊಗ್ಗ. ಜಿ.ಎನ್.ಶ್ವೇತಾ-ಉಪನಿದೇಶರ್ಕರು (ಯೋಜನೆ) ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು. ವಿ.ಆರ್.ಶೈಲಜಾ-ಉಪವಿಭಾಗಾಧಿಕಾರಿ, ಪಾಂಡವಪುರ, ಮಂಡ್ಯ. ಶಿವಪ್ಪ ಯಲ್ಲಪ್ಪ ಭಜಂತ್ರಿ- ಉಪವಿಭಾಗಾಧಿಕಾರಿ, ಬೈಲಹೊಂಗಲ. ತಿಪ್ಪೇಸ್ವಾಮಿ- ಕೌನ್ಸಿಲ್ ಕಾರ್ಯದರ್ಶಿ, ದಾವಣಗೆರೆ ಪಾಲಿಕೆ. ಟಿ.ಎನ್. ಕೃಷ್ಣಮೂರ್ತಿ- ಉವಿಭಾಗಾಧಿಕಾರಿ, ರಾಮನಗರ. ಪಿ.  ಎನ್.ಲೋಕೇಶ್- ಉಪವಿಭಾಗಾ ಧಿಕಾರಿ, ಹೊಸಪೇಟೆ, ಕುಮಾರಸ್ವಾಮಿ - ಉಪವಿಭಾಗಾಧಿಕಾರಿ, ದಾವಣಗೆರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!