
ಗದಗ(ನ.30): ಬಂಡಾಯದ ನೆಲದಲ್ಲಿ ಕಳಸಾ ಕಿಚ್ಚು ಮೊಳಗಿ 2ವರ್ಷಗಳೇ ಉರುಳಿವೆ. ಆದರೆ ಮಹಾದಾಯಿ-ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಪ್ರಕರಣವನ್ನು ಇನ್ನೂ ಕೂಡ ವಾಪಸ್ ಪಡೆದುಕೊಂಡಿಲ್ಲ. ಸರ್ಕಾರವು ಪ್ರಕರಣಗಳನ್ನು ವಾಪಸ್ ಪಡೆಯುವ ಭರವಸೆಯೊಂದನ್ನೇ ನೀಡಿ ಕೈ ತೊಳೆದುಕೊಂಡಿದೆ. ನರಗುಂದ, ಜಗಾಪುರ, ಚಿಕ್ಕನರಗುಂದ, ಹದ್ಲಿ, ಭೈರನಹಟ್ಟಿ, ಮದಗುಣಕಿ ಸೇರಿದಂತೆ ಹಲವು ಗ್ರಾಂಗಳ ಅಮಾಯಕ ರೈತರಿಗೆ ಸಮನ್ಸ್ ಜಾರಿಯಾಗಿದೆ. ಜಿಲ್ಲೆತ ನರಗುಂಡ ತಾಲೂಕಿನ 50ಕ್ಕೂ ಹೆಚ್ಚು ರೈತರಿಗೆ ಸಮನ್ಸ್ ಜಾರಿಯಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.
ಸೆಕ್ಷನ್ 143, 147, 148, 427, 504 ಅಡಿಯಲ್ಲಿ ಪ್ರಕರಣ ದಾಖಲಿಸಿ, ನವೆಂಬರ್ 30ರಂದು ನರಗುಂಡ ಜೆಎಂಎಫ್'ಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್'ನಲ್ಲಿ ಆದೇಶಿಸಲಾಗಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶಗೊಂಡ ಹೋರಾಟಗಾರರು, ಪ್ರಕರಣವನ್ನು ವಾಪಸ್ ಪಡೆದುಕೊಳ್ಳದಿದ್ದಲ್ಲಿ 2 ದಿನಗಳ ನಂತರ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.