ಹೊನ್ನಾವರದಲ್ಲಿ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಎರಡು ವರ್ಷದ ಮಗು ಸಾವು

Published : Aug 19, 2022, 11:43 AM IST
ಹೊನ್ನಾವರದಲ್ಲಿ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಎರಡು ವರ್ಷದ ಮಗು ಸಾವು

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಎರಡು ವರ್ಷದ ಮಗುವೊಂದು ಸೊಳ್ಳೆ ಓಡಿಸಲು ಬಳಸುವ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಮೃತಪಟ್ಟಿರುವ ಘಟನೆ ನಡೆದಿದೆ. 

ಹೊನ್ನಾವರ: ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು ಸಾಕಷ್ಟು ಕಷ್ಟ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಕೊಂಚ ಮೈಮರೆತರೂ ಮಕ್ಕಳು ಏನನ್ನಾದರೂ ನುಂಗಿ ಬಿಡುವುದೋ ಅಥವಾ ಕರೆಂಟ್‌ ಪ್ಲಗ್‌ಗೆ ಕೈ ಹಾಕುವುದೋ ಅಥವಾ ಇನ್ಯಾವುದಾದರೂ ಅಪಾಯ ಮಾಡಿಕೊಂಡುಬಿಡಬಹುದು. ಅದೇ ರೀತಿಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ. ಎರಡು ವರ್ಷದ ಪುಟ್ಟ ಮಗುವೊಂದು ಸೊಳ್ಳೆ ಓಡಿಸಲು ಬಳಸುವ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಮೃತಪಟ್ಟಿದೆ. ಮನೆಯಲ್ಲಿ ಯಾರೂ ಗಮನಿಸದ ಸಮಯದಲ್ಲಿ ಮಗು ಕುತೂಹಲಕ್ಕೆ ಗುಡ್‌ನೈಟ್‌ ಲಿಕ್ವಿಡ್‌ ಕುಡಿದು ಸಾವನ್ನಪ್ಪಿದೆ. ಮೃತ ಪಟ್ಟ ಮಗುವನ್ನು ಆರವ್‌ ಮಹೇಶ್‌ ನಾಯ್ಕ ಎಂದು ಗುರುತಿಸಲಾಗಿದೆ.

ಹೊನ್ನಾವರ ತಾಲೂಕಿನ ಕಾವೂರು ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗುಡ್‌ನೈಟ್‌ ಲಿಕ್ವಿಡ್‌ ಅನ್ನು ಮಗುವಿನ ಕೈಗೆ ಸಿಗುವಂತೆ ನೆಲದ ಮೇಲೆ ಇಡಲಾಗಿತ್ತು. ಮಗುವಿನ ಕೈಗೆ ಸಿಕ್ಕಿದ್ದರಿಂದ ಅದನ್ನು ಮಗು ಕುಡಿದಿದೆ. ನಂತರ ಮಣಿಪಾಲ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಮಗುವನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಎಂತಾ ದುರಂತ ಘಟನೆ ನಡೆಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. 

ಇದನ್ನೂ ಓದಿ: ಕ್ಯಾನ್ಸರ್‌ನಿಂದ ಕುಟುಂಬ ಅನಾಥವಾಗುವ ಭಯ, ಪತ್ನಿ ಹಾಗೂ ಕಂದನ ಕೊಲೆಗೈದ ವ್ಯಕ್ತಿ ಆತ್ಮಹತ್ಯೆ!

ತಮಿಳುನಾಡಿನಲ್ಲೂ ನಡೆದಿತ್ತು ಇಂತದ್ದೇ ಘಟನೆ:
ಕಳೆದ ವರ್ಷ ಮೂರು ವರ್ಷದ ಮಗುವೊಂದು ತಮಿಳುನಾಡಿದ ಪಲ್ಲವರಮ್‌ನಲ್ಲಿ ಮಸ್ಕಿಟೊ ಲಿಕ್ವಿಡ್‌ ಕುಡಿದು ಮೃತಪಟ್ಟಿತ್ತು. ಮೃತಪಟ್ಟ ಮಗುವಿನ ಹೆಸರು ಕಿಶೋರ್‌. ಪೋಷಕರು ಸುತ್ತ ಇರದ ಸಮಯದಲ್ಲಿ ಲಿಕ್ವಿಡ್‌ ಅನ್ನು ಕುಡಿದ ಮಗು ತಕ್ಷಣ ವಾಂತಿ ಮಾಡಲು ಆರಂಭಿಸಿತ್ತು. ಮಗು ಕಿರುಚಾಡುತ್ತಿರುವುದನ್ನು ಗಮನಿಸಿದ ಪೋಷಕರು ತಕ್ಷಣ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ಬೇಕಾದ ಸವಲತ್ತು ಇಲ್ಲದ ಕಾರಣ ಕ್ರೋಮ್‌ಪೇಟ್‌ನ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಲಾಯಿತು. ನಂತರ ಅಲ್ಲೂ ಸಾಧ್ಯವಾಗದೇ ಎಗ್ಮೋರ್‌ನ ಮಕ್ಕಳ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಸಾಕಷ್ಟು ಸಮಯ ರಸ್ತೆಯಲ್ಲೇ ವ್ಯರ್ಥವಾಗಿತ್ತು. ಇದರ ಪರಿಣಾಮ ಮಗು ಚಿಕಿತ್ಸೆ ವೇಳೆ ಮೃತಪಟ್ಟಿತ್ತು.

ಇದನ್ನೂ ಓದಿ: Belagavi: ಸವದತ್ತಿಯಲ್ಲಿ ಕತ್ತು ಕೊಯ್ದು ಪತ್ನಿ ಹತ್ಯೆಗೈದ ಪಾಪಿ ಪತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ