ಲಾಲು ಜೊತೆ ಜೈಲಲ್ಲಿರಲು ಹಣ ಕದ್ದು ಇವರೂ ಜೈಲು ಸೇರಿಕೊಂಡರು!

Published : Jan 10, 2018, 11:24 AM ISTUpdated : Apr 11, 2018, 12:43 PM IST
ಲಾಲು ಜೊತೆ ಜೈಲಲ್ಲಿರಲು ಹಣ ಕದ್ದು ಇವರೂ ಜೈಲು ಸೇರಿಕೊಂಡರು!

ಸಾರಾಂಶ

ಲಾಲು ಜತೆ ತಾವೂ ಜೈಲಿನಲ್ಲಿರಬೇಕು ಎಂದು ಬಯಸಿ ಇಬ್ಬರು ಬೆಂಬಲಿಗರು ಉದ್ದೇಶ ಪೂರ್ವಕವಾಗಿ ಅಪರಾಧ ಎಸಗಿ ರಾಂಚಿಯ ಬಿರ್ಲಾ ಮುಂಡಾ ಜೈಲು  ಸೇರಿಕೊಂಡಿದ್ದಾರೆ.

ರಾಂಚಿ (ಜ.10): ಲಾಲು ಜತೆ ತಾವೂ ಜೈಲಿನಲ್ಲಿರಬೇಕು ಎಂದು ಬಯಸಿ ಇಬ್ಬರು ಬೆಂಬಲಿಗರು ಉದ್ದೇಶ ಪೂರ್ವಕವಾಗಿ ಅಪರಾಧ ಎಸಗಿ ರಾಂಚಿಯ ಬಿರ್ಲಾ ಮುಂಡಾ ಜೈಲು  ಸೇರಿಕೊಂಡಿದ್ದಾರೆ.

ಮದನ್ ಮತ್ತು ಲಕ್ಷ್ಮಣ್ ಎಂಬುವರೇ ಜೈಲು ಸೇರಿದ ‘ಲಾಲು ಅಂಧಾಭಿಮಾನಿಗಳು’. ಇವರ ವಿರುದ್ಧ ಸುಮಿತ್ ಯಾದವ್ ಎಂಬ ಪಕ್ಕದ ಮನೆಯ ವ್ಯಕ್ತಿ ರಾಂಚಿಯ ದರೋಂಡಾ ಠಾಣೆಗೆ ದೂರು ನೀಡಿ, ‘ನನ್ನನ್ನು ಮದನ್ ಹಾಗೂ ಲಕ್ಷ್ಮಣ್ ಹೊಡೆದರು ಹಾಗೂ 10 ಸಾವಿರ ರೂ. ಕಿತ್ತುಕೊಂಡರು’ ಎಂದು ಆರೋಪಿಸಿದ್ದರು. ಆದರೆ ಪೊಲೀಸರಿಗೆ ಈ ದೂರಿನ ಸಾಚಾತನದ ಬಗ್ಗೆ ಸಂದೇಹ ಬಂದು, ದಾಖಲಿಸಿ

ಕೊಳ್ಳಲು ನಿರಾಕರಿಸಿದರು. ಆದರೆ ಕೊನೆಗೆ ಲೋವರ್ ಬಜಾರ್ ಠಾಣೆಯಲ್ಲಿ ಈ ದೂರು ಸ್ವೀಕಾರಗೊಂಡಿತು. ಬಳಿಕ ಈ ಲಾಲು ಆಪ್ತರು ಠಾಣೆಗೆ ಶರಣಾದರು. ವಿಶೇಷವೆಂದರೆ ಲಾಲು ಜೈಲು ಪಾಲಾಗಬಹುದೆಂಬ ಗುಮಾನಿಯ ಮೇರೆಗೆ ಲಾಲು ಜೈಲು ಸೇರುವ ಮುನ್ನವೇ ಅಪರಾಧ ಎಸಗಿ ಜೈಲು ಸೇರಿಕೊಂಡಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ