ಉಗ್ರರಿಗೆ ಹಣ : 2 ಆಭರಣ ವ್ಯಾಪಾರಿಗಳ ಬಂಧನ

Published : Feb 11, 2018, 08:48 AM ISTUpdated : Apr 11, 2018, 01:08 PM IST
ಉಗ್ರರಿಗೆ ಹಣ : 2 ಆಭರಣ ವ್ಯಾಪಾರಿಗಳ ಬಂಧನ

ಸಾರಾಂಶ

ಕಳೆದ ಐದು ದಿನಗಳಿಂದ ವಿವಿಧೆಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ, ಮುಜಾಫರ್‌ ನಗರ ಮೂಲದ ಇಬ್ಬರು ಆಭರಣ ಉದ್ಯಮಿಗಳನ್ನು ಬಂಧಿಸಿದೆ.

ಮೇರಠ್‌: ಕಳೆದ ಐದು ದಿನಗಳಿಂದ ವಿವಿಧೆಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ, ಮುಜಾಫರ್‌ ನಗರ ಮೂಲದ ಇಬ್ಬರು ಆಭರಣ ಉದ್ಯಮಿಗಳನ್ನು ಬಂಧಿಸಿದೆ.

ಲಷ್ಕರ್‌ ಎ ತೊಯ್ಬಾ ನಿರ್ವಾಹಕನಿಗೆ ಹಣ ಒದಗಿಸಿದ ಆಪಾದನೆಯಲ್ಲಿ ಆಭರಣ ಉದ್ಯಮಿಗಳಾದ ದಿನೇಶ್‌ ಗರ್ಗ್‌ (34) ಮತ್ತು ಆದೀಶ್‌ ಕುಮಾರ್‌ ಜೈನ್‌ (54)ರನ್ನು ಬಂಧಿಸಲಾಗಿದೆ. ಈ ಇಬ್ಬರು ವ್ಯಕ್ತಿಗಳಿಗೆ ಸೌದಿ ಅರೇಬಿಯಾ ಮೂಲದ ಚಿನ್ನ ಕಳ್ಳ ಸಾಗಾಣಿಕೆ ದಾರರೊಂದಿಗೆ ಟೆಲಿಫೋನ್‌ ಸಂಪರ್ಕವಿತ್ತು.

ತಾವು ಖರೀದಿಸಿದ ಕಳ್ಳ ಸಾಗಾಣಿಕೆ ಮಾಡಿದ ಚಿನ್ನದ ಬೆಲೆಯನ್ನು ಅವರು ನಗದು ರೂಪದಲ್ಲಿ ಕೊರಿಯರ್‌ ಅಥವಾ ಕೆಲವೊಂದು ಅಕ್ರಮ ಮೂಲಗಳ ಮೂಲಕ ಪಾವತಿಸುತ್ತಿದ್ದರು.

 ಇತ್ತೀಚೆಗೆ ಉತ್ತರಾಖಂಡದ ರೂರ್ಕಿಯಲ್ಲಿ ಬಂಧಿತನಾದ ಅಬ್ದುಲ್‌ ಸಮದ್‌ ಎಂಬಾತನ ಒಂದು ಮೂಲದಿಂದಲೂ ಈ ಹಣ ಪಾವತಿಯಾಗುತಿತ್ತು. ಸಮದ್‌ ಲಷ್ಕರ್‌ ಉಗ್ರ ಜಾಲದ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್ ನಾಯಕರ ಕುಟುಂಬಕ್ಕೆ ಸಂಕಷ್ಟ: ಏನಿದು ಕೇಸ್?
ದೇಶದಲ್ಲಿ ಬಂಗಾರ, ಬೆಳ್ಳಿ ದಾಖಲೆ : ಬೆಲೆ ಏರಿಕೆ ಪರ್ವದ ಹಿಂದಿನ ರಹಸ್ಯ ಏನು?