
ಜಮ್ಮು ಕಾಶ್ಮೀರ(ಮೇ.14): ಪಾಕಿಸ್ತಾನದ ಅಟ್ಟಹಾಸ ಮಿತಿ ಮೀರುತ್ತಿದೆ. ಪದೇ ಪದೇ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನ ಇತ್ತೀಚೆಗಷ್ಟೇ ಯೋಧರ ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯವೆಸಗಿತ್ತು. ಅಷ್ಟೇ ಅಲ್ಲ ಹಣಕ್ಕಾಗಿ ಬ್ಯಾಂಕ್ ಮೇಲೂ ದಾಳಿ ಮಾಡಿ ದುರ್ಬುದ್ಧಿ ತೋರಿತ್ತು. ಇಷ್ಟಾದರೂ ಸುಮ್ಮನಿರದ ಪಾಕ್ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘಿಸುತ್ತಿದೆ.
ಗಡಿ ಭಾಗದಲ್ಲಿ ಪಾಕ್ ಉಗ್ರರ ಕದನ ವಿರಾಮ ಉಲ್ಲಂಘನೆ ಮತ್ತು ಹಿಂಸಾತ್ಮಕ ದಾಳಿ ಮುಂದುವರೆದಿದೆ. ಜಮ್ಮು-ಕಾಶ್ಮೀರದ ನೌಶೆರಾ ಸೆಕ್ಟರ್ ಬಳಿ ಉಗ್ರರಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಅಮಾಯಕ ತಂದೆ - ಮಗಳು ಬಲಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ. ಭಾರತೀಯ ಸೇನಾ ಶಿಬಿರವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡ್ತಿದ್ದು 3 ದಿನಗಳಲ್ಲಿ 4 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಮೊನ್ನೆಯಷ್ಟೇ ನೌಶೇರಾ ವಲಯದಲ್ಲಿ ಪಾಕ್ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಳು. ಕಳೆದ ವಾರ ಪೂಂಛ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಗೆ ಬಿಎಸ್ಎಫ್ ಯೋಧರು ಹತ್ಯೆಯಾಗಿದ್ದರು..
ನೌಶೇರಾದಲ್ಲಿ ಶಾಲೆಗಳಿಗೆ ರಜೆ ಘೋಷಣೆ: ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
ಇನ್ನು ನೌಶೇರಾದಲ್ಲಿ ಪಾಕ್ ದಾಳಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ- ಕಾಲೇಜುಗಳುಗಳಿಗೆ ರಜೆ ಘೋಷಿಸಲಾಗಿದೆ. ಗಡಿಭಾಗದ ಸಾವಿರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಕೆಲವರು ಸೇನೆ ನಿರ್ಮಿಸಿರುವ ಮರಳು ಚೀಲಗಳ ಮಧ್ಯೆಯೇ ನಲಗುತ್ತಾ ರಕ್ಷಣೆ ಪಡೆಯುತ್ತಿದ್ದಾರೆ.
ಇವೆಲ್ಲದರ ಮಧ್ಯೆ 26/11 ದಾಳಿಯ ಮಾಸ್ಟರ್ ಮೈಂಡರ್ ಹಫೀಜ್ ಸಯೀದ್ ಪಾಕ್ ಪೊಲೀಸರ ಭದ್ರತೆಯಲ್ಲೇ ಲಾಹೋರ್'ನಲ್ಲಿ ಸಾರ್ವಜನಿಕವಾಗಿ ಓಡಾಡುತ್ತಿರುವ ವಿಷಯ ಬಯಲಾಗಿದೆ. ಈ ಮೂಲಕ ಹಫೀಜ್ಗೆ ಗೃಹ ಬಂಧನ ವಿಧಿಸಿದ್ದೇವೆ ಅಂತ ಸುಳ್ಳು ಹೇಳ್ತಿರೋ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಬಯಲಾಗಿದೆ.
ಒಟ್ಟಿನಲ್ಲಿ ಪಾಕ್ ಪುಂಡಾಟದಿಂದ ಭಾರತದಲ್ಲಿ ಶಾಂತಿ ಕದಡಿದ್ದು ದೇಶ ರಕ್ಷಣೆಗೆ ಹೋರಾಟದ ಕೂಗು ಕೇಳಿಬಂದಿದೆ. ಪ್ರತಿದಾಳಿ ಮೂಲಕ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಉಗ್ರರ ಹುಟ್ಟಡಗಿಸಲು ನಮ್ಮ ಸೈನಿಕರು ಎದೆಯೊಡ್ಡಿ ನಿಂತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.