
ಭೋಪಾಲ್ : ದೇಶದಲ್ಲಿ ಮುಂಗಾರು ತಡವಾಗಿದ್ದು,ಬಿಸಿಲ ಬೇಗೆ ಪ್ರಾಣಿಗಳ ಜೀವಕ್ಕೂ ಕುತ್ತು ತರುತ್ತಿದೆ.
ಮಧ್ಯ ಪ್ರದೇಶದ ಜೋಶಿ ಬಾಬಾ ಕಾಡಿನಲ್ಲಿ 15 ಮಂಗಗಳು ನೀರಿಲ್ಲದೇ ಪ್ರಾಣ ಬಿಟ್ಟಿವೆ. ಈ ಕಾಡಿನಲ್ಲಿಒಂದೇ ಪ್ರದೇಶದಲ್ಲಿ ನೀರಿದ್ದು, ಆದರೆ ಇನ್ನೊಂದು ಗುಂಪಿನ ಮಂಗಗಳು ಈ ಗುಂಪಿಗೆ ಕುಡಿಯಲು ಬಿಡದೇ ಇರುವುದೇ ಈ ದುರ್ಘಟನೆಗೆ ಕಾರಣವಾಗಿದೆ.
ಇನ್ನುಕೆಲ ಮಂಗಗಳುಸೋಂಕಿನಿಂದಲೂ ಪ್ರಾಣಬಿಟ್ಟಿವೆ. ಈಗಾಗಲೇ ಸತ್ತ ಮಂಗಗಳ ದೇಹಗಳು ಕೊಳೆಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೃತ ಮಂಗಗಳ ದೇಹವನ್ನು ಸುಟ್ಟು ಹಾಕುವುದಾಗಿ ಅರಣ್ಯ ಇಲಾಖೆ ಅದಿಕಾರಿಗಳು ಹೆಳಿದ್ದಾರೆ.
ಇನ್ನು ಇಲ್ಲಿ ಸತ್ತ ಮಂಮಗಳ ಮೃದೇಹವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೂ ಕಳುಹಿಸಲಾಗಿದ್ದು, ಎಲ್ಲಾ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.