13ರ ಭಾರತೀಯ ಬಾಲಕ ದುಬೈನಲ್ಲಿ ಸಾಫ್ಟ್‌ವೇರ್‌ ಕಂಪನಿಯ ಮಾಲೀಕ!

Published : Dec 17, 2018, 08:45 AM IST
13ರ ಭಾರತೀಯ ಬಾಲಕ ದುಬೈನಲ್ಲಿ ಸಾಫ್ಟ್‌ವೇರ್‌ ಕಂಪನಿಯ ಮಾಲೀಕ!

ಸಾರಾಂಶ

4 ವರ್ಷಗಳ ಹಿಂದೆ ತನ್ನ ಮೊದಲ ಸಾಫ್ಟ್‌ವೇರ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದ 13 ವರ್ಷದ ಭಾರತೀಯ ಬಾಲಕನೋರ್ವ ದುಬೈನಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಕಂಪನಿಯನ್ನು ಮಾಲೀಕನಾಗಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ

ದುಬೈ[ಡಿ.17]: ನಾಲ್ಕು ವರ್ಷಗಳ ಹಿಂದೆ ತನ್ನ ಮೊದಲ ಸಾಫ್ಟ್‌ವೇರ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದ 13 ವರ್ಷದ ಭಾರತೀಯ ಬಾಲಕನೋರ್ವ ದುಬೈನಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಕಂಪನಿಯನ್ನು ಹೊಂದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

ಗ್ರಾಹಕರಿಗಾಗಿ ವೆಬ್‌ಸೈಟ್‌, ಲೋಗೋಗಳನ್ನು ಅಭಿವೃದ್ಧಿ ಪಡಿಸುವ ಹವ್ಯಾಸ ಹೊಂದಿದ್ದ ಕೇರಳ ಮೂಲದ ಆದಿತ್ಯನ್‌ ರಾಜೇಶ್‌ ಎಂಬ ವಿದ್ಯಾರ್ಥಿ 9 ವರ್ಷದವನಿದ್ದಾಗಲೇ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿ ಪಡಿಸಿದ್ದ. ಇದೀಗ ಟ್ರಿನೆಟ್‌ ಸೊಲ್ಯೂಷನ್ಸ್‌ ಎಂಬ ತಮ್ಮದೇ ಆದ ಸ್ವಂತ ಕಂಪನಿಯನ್ನು ಅದಿತ್ಯನ್‌ ಅವರು ಆರಂಭಿಸಿದ್ದಾರೆ ಎಂದು ದುಬೈ ಮೂಲದ ಆಂಗ್ಲ ಪತ್ರಿಕೆ ‘ಖಲೀಜ್‌ ಟೈಮ್ಸ್‌’ ವರದಿ ಮಾಡಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕ ಆದಿತ್ಯನ್‌, ‘ಕೇರಳದ ತಿರುವಿಲ್ಲಾ ಎಂಬಲ್ಲಿ ನಾನು ಜನಿಸಿದೆ. ನಾನು 5 ವರ್ಷದವನಿದ್ದಾಗ ನಮ್ಮ ಕುಟುಂಬ ದುಬೈಗೆ ವಲಸೆ ಬಂದಿತು. ನನಗೆ ಬಿಬಿಸಿ ಟೈಪಿಂಗ್‌ ವೆಬ್‌ಸೈಟ್‌ ಅನ್ನು ನನ್ನ ತಂದೆ ಮೊದಲ ಬಾರಿಗೆ ತೋರಿಸಿದರು. ಅಲ್ಲಿಂದ ಇದರಲ್ಲಿ ಉತ್ಸಾಹ ಬೆಳೆಯಿತು,’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!