ಯುಪಿಎ ಕಾಲದ 11 ಹಗರಣ ಬಚ್ಚಿಡಲಾಗಿತ್ತು: ಮಾಜಿ ಸಿಎಜಿ

Published : Oct 05, 2017, 12:53 PM ISTUpdated : Apr 11, 2018, 01:08 PM IST
ಯುಪಿಎ ಕಾಲದ 11 ಹಗರಣ ಬಚ್ಚಿಡಲಾಗಿತ್ತು: ಮಾಜಿ ಸಿಎಜಿ

ಸಾರಾಂಶ

ಯುಪಿಎ ಸರ್ಕಾರದ ನಂತರ 11 ಹಗರಣಗಳ ಕುರಿತ ವರದಿಯನ್ನು ಸಂಸತ್ತಿನ ಮುಂದೆ ಮಂಡಿಸಲಾಯಿತಾದರೂ, ಅದನ್ನು ತಿದ್ದುಪಡಿ ಮಾಡಿ, ಹಗರಣಗಳ ತೀವ್ರತೆಯನ್ನು ಕಡಿಮೆ ಮಾಡಲಾಗಿತ್ತು.

ನವದೆಹಲಿ(ಅ.05): ಕಾಮನ್‌'ವೆಲ್ತ್, 2ಜಿ, ಕಲ್ಲಿದ್ದಲು ಹಗರಣಗಳು ಯುಪಿಎ ಅವಧಿಯಲ್ಲಿ ಬೆಳಕಿಗೆ ಬಂದಿದ್ದವಾದರೂ, ಇನ್ನೂ 11 ಹಗರಣಗಳನ್ನು ಮುಚ್ಚಿಡಲಾಗಿತ್ತು ಎಂದು ಸಿಎಜಿ ಮಹಾನಿರ್ದೇಶಕರಾಗಿ ನಿವೃತ್ತರಾಗಿರುವ ಆರ್.ಬಿ. ಸಿನ್ಹಾ ಹೊಸ ಬಾಂಬ್ ಸಿಡಿಸಿದ್ದಾರೆ.

ಯುಪಿಎ ಕಾಲಾವಧಿಯಲ್ಲಿ ದೂರಸಂಪರ್ಕ ಇಲಾಖೆಗೆ ಸಂಬಂಧಿಸಿದ 11 ಹಗರಣಗಳ ಮಾಹಿತಿಯನ್ನು ಸಿಎಜಿ ಉನ್ನತಾಧಿಕಾರಿಗಳಿಗೆ ರವಾನಿಸಲಾಗಿತ್ತು. 2014ರ ಲೋಕಸಭೆ ಚುನಾವಣೆ ಪೂರ್ವದಲ್ಲಿ ಯುಪಿಎ ಮೇಲೆ ಅದು ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ‘ಈಗ ಬಹಿರಂಗಪಡಿಸುವುದು ಸರಿಯಲ್ಲ’ ಎಂಬ ಭಾವನೆಯನ್ನು ತಮಗೆ ವ್ಯಕ್ತಪಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ ಎಂದು ‘ರಿಪಬ್ಲಿಕ್ ಟೀವಿ’ ವರದಿ ಮಾಡಿದೆ.

ಯುಪಿಎ ಸರ್ಕಾರದ ನಂತರ 11 ಹಗರಣಗಳ ಕುರಿತ ವರದಿಯನ್ನು ಸಂಸತ್ತಿನ ಮುಂದೆ ಮಂಡಿಸಲಾಯಿತಾದರೂ, ಅದನ್ನು ತಿದ್ದುಪಡಿ ಮಾಡಿ, ಹಗರಣಗಳ ತೀವ್ರತೆಯನ್ನು ಕಡಿಮೆ ಮಾಡಲಾಗಿತ್ತು. ಅಂದಿನ ಸಿಎಜಿ ಆಗಿದ್ದ ಶಶಿಕಾಂತ್ ಶರ್ಮಾ ಅವರ ಉತ್ತಮ ನಡವಳಿಕೆಯಿಂದ ಜನರು ಲಾಭ ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರೆಂಟ್‌ ಅಕೌಂಟಲ್ಲಿ ₹150 ಕೋಟಿ ಅಲ್ಲ, ₹1 ಸಾವಿರ ಕೋಟಿ ವಹಿವಾಟು
ಬಾಗಲಕೋಟೆ: ಬುದ್ಧಿಮಾಂದ್ಯನ ಮೇಲೆ ಅಮಾನವೀಯ ಹಲ್ಲೆ