
ಉತ್ತರ ಪ್ರದೇಶ (ಡಿ. 28): ಮಹಿಳೆಯೋರ್ವಳು ತಮ್ಮ ಜನ್ಧನ್ ಖಾತೆಯಲ್ಲಿ ತಮ್ಮದಲ್ಲದ 100 ಕೋಟಿ ರೂ. ಹಣ ಜಮಾ ಆಗಿರುವುದನ್ನು ಅರಿತು ಅಚ್ಚರಿಗೊಳಗಾದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಶೀತಲ್ ಯಾದವ್ ಎಂಬುವವರ ಜನ್ಧನ್ ಖಾತೆಗೆ 100 ಕೋಟಿ ರೂ. ಬಂದಿದೆ. ಮೀರತ್ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರ್ಯಾಂಚ್ವೊಂದರಲ್ಲಿ ಶೀತಲ್ ಖಾತೆ ಹೊಂದಿದ್ದು, ಈ ಖಾತೆಗೆ ಹಣ ಬಂದಿದೆ. ಈ ಕುರಿತು ಬ್ಯಾಂಕ್ ಅಧಿಕಾರಿಗಳನ್ನು ಮಹಿಳೆ ಸಂಪರ್ಕಿಸಿದ್ದಾಳೆ. ಆದರೆ ಅಧಿಕಾರಿಗಳು ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಶೀತಲ್ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾಳೆ.
ತನ್ನ ಪತಿ ಜಿಲೆಂದರ್ ಸಿಂಗ್ ಮೂಲಕ ಪಿಎಂಒಗೆ ಮೇಲ್ ಮಾಡಿಸಿರುವ ಶೀತಲ್ ಯಾದವ್, ಪ್ರಕರಣ ಕುರಿತು ಮಾಹಿತಿ ನೀಡಿದ್ದಾಳೆ. ಡಿ. 18 ರಂದು ಐಸಿಐಸಿಐ ಎಟಿಎಂಗೆ ಹಣ ಪಡೆಯಲು ಹೋದ ವೇಳೆ ಖಾತೆಯಲ್ಲಿ 99,99,99,394 ರೂ. ಇರುವುದು ಗೊತ್ತಾಗಿದೆ. ಇದನ್ನು ನೋಡಿ ಅಚ್ಚರಿಗೊಂಡ ಮಹಿಳೆ ಇನ್ನೊಂದು ಎಟಿಎಂಗೆ ಹೋಗಿ ಚೆಕ್ ಮಾಡಿದಾಗಲೂ ಅಷ್ಟೇ ಹಣ ತೋರಿಸಿದೆ. ಬಳಿಕ ಶೀತಲ್ ಬ್ಯಾಂಕ್ಗೆ ತೆರಳಿ ಮಾಹಿತಿ ನೀಡಿದ್ದಳು. ಆದರೆ ಅವರು ಮಹಿಳೆಯನ್ನು ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಪಿಎಂಒ ಕಚೇರಿ ಸಂಪರ್ಕಿಸಿ ಡಿ. 26 ರಂದು ಮಾಹಿತಿ ನೀಡಿದ್ದಾಳೆ.
ಈ ಕುರಿತು ಬ್ಯಾಂಕ್ನ ಯಾವುದೇ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ. ಜನ್ಧನ್ ಖಾತೆಯಲ್ಲಿ 50 ಸಾವಿರ ರೂ.ವರೆಗೆ ಮಾತ್ರ ಹಣ ಇರಬೇಕು. ಆದ್ರೆ ಆ ಮಿತಿಯನ್ನು ಈ ಖಾತೆ ದಾಟಿದೆ ಎಂದು ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶೀತಲ್ ಪತಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.