ಸೊಸೆಯಂದಿರ ಕಾಟ ತಾಳದೆ ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೆ ಯತ್ನ!

Kannadaprabha News   | Asianet News
Published : Sep 06, 2021, 07:32 AM ISTUpdated : Sep 06, 2021, 08:51 AM IST
ಸೊಸೆಯಂದಿರ ಕಾಟ ತಾಳದೆ ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೆ ಯತ್ನ!

ಸಾರಾಂಶ

ಸೊಸೆಯಂದಿರ ಕಾಟ ತಾಳಲಾರದೇ ಮಲಪ್ರಭಾ ನದಿಗೆ ಹಾರಿ ವೃದ್ಧೆಯೊಬ್ಬರು ಆತ್ಮಹತ್ಯೆ ಬಾದಾಮಿ ತಾಲೂ​ಕಿ​ನ ಶಿವಯೋಗ ಮಂದಿರದ ಸೇತುವೆ ಬಳಿ ಮಲಪ್ರಭಾ ನದಿಗೆ ಹಾರಿದ ವೃದ್ಧೆ

ಬಾದಾಮಿ(ಸೆ.06) : ಸೊಸೆಯಂದಿರ ಕಾಟ ತಾಳಲಾರದೇ ಮಲಪ್ರಭಾ ನದಿಗೆ ಹಾರಿ ವೃದ್ಧೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. 

ಬಾದಾಮಿ ತಾಲೂ​ಕಿ​ನ ಶಿವಯೋಗ ಮಂದಿರದ ಸೇತುವೆ ಬಳಿ ಮಲಪ್ರಭಾ ನದಿಗೆ ವೃದ್ಧೆ ಹಾರಿದ್ದು, ಈ ವೇಳೆ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಮಂಗಳೂರು ಗ್ರಾಮದ ಯುವಕರು ವೃದ್ಧೆಯನ್ನು ರಕ್ಷಿಸಿದ್ದಾರೆ.

 

ಹಾಸನ; ರಾತ್ರಿ ಘೋರ ಅಪಘಾತ..ಹೆಂಡತಿ ಸ್ಟಾಟ್ ಡೆತ್.. ಮುಂಜಾನೆ ಪ್ರಕರಣವೇ ಬೇರೆ!

 ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ವೃದ್ಧೆ, ಸೊಸೆಯಂದಿರ ಕಾಟ ತಾಳಲಾರದೇ ಮನೆಬಿಟ್ಟು ಬಂದಿದ್ದಾಳೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ವೃದ್ಧೆ ನಿರ್ಧರಿಸಿದ್ದು, ಮಲಪ್ರಭಾ ನದಿಗೆ ಹಾರಿದ್ದಾಳೆ. 

ಕೊನೆಗೆ ಯುವಕರು ಆಕೆಯನ್ನು ರಕ್ಷಿಸಿ, ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ವೃದ್ಧೆ ತನ್ನ ಗೋಳನ್ನು ಹೇಳಿಕೊಂಡಿದ್ದು, ಯುವಕರು ಆಕೆಯನ್ನು ಶಿವಯೋಗ ಮಂದಿರಕ್ಕೆ ಬಿಟ್ಟು ಬಂದಿದ್ದಾರೆ. ಆತ್ಮಹತ್ಯೆ ಯತ್ನದ ವೇಳೆ ವೃದ್ಧೆಯ ತಲೆಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.

PREV
click me!

Recommended Stories

Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ
ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?