ಮಡಿಕೇರಿಯಲ್ಲಿ ಅಪರೂಪದ ಚುಕ್ಕೆ ಕಾಡು ಗೂಬೆ ರಕ್ಷಣೆ

Published : Apr 08, 2020, 09:58 AM ISTUpdated : Apr 08, 2020, 10:39 AM IST
ಮಡಿಕೇರಿಯಲ್ಲಿ ಅಪರೂಪದ ಚುಕ್ಕೆ ಕಾಡು ಗೂಬೆ ರಕ್ಷಣೆ

ಸಾರಾಂಶ

ಅಪರೂಪದಲ್ಲಿ ಅಪರೂಪವೆನಿಸಿರುವ ಚುಕ್ಕೆ ಕಾಡು ಗೂಬೆ (ಬೊಟ್ಟಕಾಡ್‌ ಗುಮ್ಮ) ಮರಿಯೊಂದೊನ್ನು ಮರಗೋಡಿನಲ್ಲಿ ರಕ್ಷಿಸಲಾಗಿದೆ.  

ಮಡಿಕೇರಿ(ಏ.08): ಅಪರೂಪದಲ್ಲಿ ಅಪರೂಪವೆನಿಸಿರುವ ಚುಕ್ಕೆ ಕಾಡು ಗೂಬೆ (ಬೊಟ್ಟಕಾಡ್‌ ಗುಮ್ಮ) ಮರಿಯೊಂದೊನ್ನು ಮರಗೋಡಿನಲ್ಲಿ ರಕ್ಷಿಸಲಾಗಿದೆ. ತಾಯಿಯಿಂದ ಬೇರ್ಪಟ್ಟಿದ್ದ ಈ ಗೂಬೆ ಮರಿ ತೋಟದ ರಸ್ತೆಬದಿಯಲ್ಲಿ ಕುಳಿತಿತ್ತು.

ಇದನ್ನು ಗಮನಿಸಿದ ಚಿತ್ರಕಲಾವಿದ ಐಮಂಡ ರೂಪೇಶ್‌ ನಾಣಯ್ಯ ತಕ್ಷಣವೇ ಮಡಿಕೇರಿ ಡಿಎಫ್‌ಒ ಪ್ರಭಾಕರನ್‌ ಅವರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ರೇಂಜರ್‌ ಟೈಗರ್‌ ದೇವಯ್ಯ ಮತ್ತು ಸಿಬ್ಬಂದಿ ಗೂಬೆ ಮರಿಯನ್ನು ವಶಕ್ಕೆ ಪಡೆದರು.

ಕೊರೋನಾ ಸಂಪೂರ್ಣ ಹತೋಟಿಗೆ ಬರುವವರೆಗೂ ಲಾಕ್‌ಡೌನ್‌, ಬಿಗಿ ಬಂದೋಬಸ್ತ್

ಬಿಳಿ ಬಣ್ಣದ ಈ ಗೂಬೆ ನೋಡಲು ಅತ್ಯಾಕರ್ಷಕವಾಗಿದ್ದು ಕಾಳಸಂತೆಯಲ್ಲಿ ಲಕ್ಷಾಂತರ ರುಪಾಯಿ ಬೆಲೆ ಬಾಳುತ್ತದೆ ಎನ್ನಲಾಗಿದೆ. ಗೂಬೆ ಮರಿಯು ಆರೋಗ್ಯವಂತವಾಗಿದ್ದು ಕೆಲ ದಿನಗಳ ಕಾಲ ನಿಗಾವಹಿಸಿ ಬಳಿಕ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿ ದೇವಯ್ಯ ತಿಳಿಸಿದ್ದಾರೆ. 

PREV
click me!

Recommended Stories

ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ
ಚಾಮರಾಜನಗರ ಶೂಟೌಟ್‌: ಅರಣ್ಯಾಧಿಕಾರಿ ವಿರುದ್ಧFIR.. ಪ್ರಕರಣದ ಸತ್ಯ ಬಿಚ್ಚಿಟ್ಟ ಐಜಿಪಿ ಬೋರಲಿಂಗಯ್ಯ..!