ರಾಮನಗರದಲ್ಲಿ ಡಿಕೆಸು ಎದುರೆ ಶಾಸಕ-ಜಿಲ್ಲಾಧಿಕಾರಿ ಜಟಾಪಟಿ

Published : Jan 18, 2020, 03:11 PM IST
ರಾಮನಗರದಲ್ಲಿ ಡಿಕೆಸು ಎದುರೆ ಶಾಸಕ-ಜಿಲ್ಲಾಧಿಕಾರಿ ಜಟಾಪಟಿ

ಸಾರಾಂಶ

ರಾಮನಗರ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲೇ ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. 

ರಾಮನಗರ [ಜ.18]: ಮಾಗಡಿ ಜೆಡಿಎಸ್ ಶಾಸಕ ಎ.ಮಂಜು ಹಾಗೂ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ನಡುವೆ ಮಾತಿನ ಚಕಮಕಿ ನಡೆದಿದೆ. 

ರಾಮನಗರ ಜಿಲ್ಲಾ ಪಂಚಾಯತ್ ಸಂಭಾಂಗಣದಲ್ಲಿ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಆರೋಪ ಮಾಡಲಾಗಿದೆ. ಜಿಲ್ಲಾಧಿಕಾರಿ ಅರ್ಚನಾ ಮೇಲೆ ಮಾಗಡಿ ಶಾಸಕ ಎ.ಮಂಜು ಗರಂ ಆಗಿದ್ದು, ಜಟಾಪಟಿ ನಡೆದಿದೆ. 

ಕೋಮು ಸೌಹಾರ್ದತೆಗೆ ಬೆಂಕಿ ಹಚ್ಚುತ್ತಿರುವ ಪ್ರಭಾಕರ್‌ ಭಟ್‌: ಡಿಕೆಸು

ಮಾಗಡಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾವ ಮಾಹಿತಿಯನ್ನೂ ಕೊಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಾನಂದೂರು, ವಿರಾಪುರ ಗ್ರಾಮ ಬಾಲಗಂಗಾಧರ ನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಹುಟ್ಟೂರು. ಈ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ ಕೊಟ್ಟಾಗ ಇಲ್ಲಿನ ಶಾಸಕರಿಗೆ ಮಾಹಿತಿ ಕೊಟ್ಟಿಲ್ಲ. ನಿರ್ಲಕ್ಷ್ಯ ಧೋರಣೆ ತೋರುತ್ತಾರೆ ಎಂದರು. 

ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಂಸದ ಡಿ.ಕೆ.ಸುರೇಶ್.

ನಮ್ಮ ಕ್ಷೇತ್ರಕ್ಕೆ ಬಂದಾಗ ನಮಗೆ ಮಾಹಿತಿ ಕೊಡಬೇಕು. ಬೇರೆ ಯಾರ್ಯಾರೋ ಇಲ್ಲಿಗೆ ಬರುತ್ತಾರೆ. ಅವರೆಲ್ಲಾ ಯಾರು ಎಂದು ಶಾಸಕ ಎ. ಮಂಜು ಜಿಲ್ಲಾಧಿಕಾರಿ ಅರ್ಚನಾ ಅವರನ್ನು ಪ್ರಶ್ನೆ ಮಾಡಿದರು. 

PREV
click me!

Recommended Stories

ಎಲ್ಲವೂ ರಾಯರ ಪವಾಡ: ಸಾವಿನ ದವಡೆಯಿಂದ ಪಾರಾದ MBBS ವಿದ್ಯಾರ್ಥಿನಿ! ವೀಲ್ ಚೇರ್‍‌ನಿಂದ ಎದ್ದು ಓಡಾಡಿದ್ದು ಹೇಗೆ?
ಜಮೀರ್, ನಾಗೇಂದ್ರರನ್ನು ಸಂಪುಟದಿಂದ ಕೈಬಿಡಿ: ಸರ್ಕಾರಕ್ಕೆ ಜನಾರ್ದನ ರೆಡ್ಡಿ ಎಚ್ಚರಿಕೆ ಕೊಟ್ಟಿದ್ಯಾಕೆ?