ದಾಂಡೇಲಿ: ಲಾರಿ- ಬೈಕ್‌ ನಡುವೆ ಡಿಕ್ಕಿ, ಇಬ್ಬರ ದುರ್ಮರಣ

Kannadaprabha News   | Asianet News
Published : Dec 18, 2020, 03:48 PM IST
ದಾಂಡೇಲಿ: ಲಾರಿ- ಬೈಕ್‌ ನಡುವೆ ಡಿಕ್ಕಿ, ಇಬ್ಬರ ದುರ್ಮರಣ

ಸಾರಾಂಶ

ಲಾರಿ-ಬೈಕ್‌ ಮಧ್ಯೆ ಅಪಘಾತ| ಉತ್ತರ ಕನ್ನಡ ಜಿಲ್ಲೆಯ ದಾಂಡೇ​ಲಿಯಲ್ಲಿ ನಡೆದ ದುರ್ಘಟನೆ| ಮೃತರು ವೆಸ್ಟ್‌ಕೋಸ್ಟ್‌ಪೇಪರ್‌ಮಿಲ್ಲಿನ ಕಾರ್ಮಿಕರು| ಘಟನೆ ಬಳಿಕ ಲಾರಿ ಚಾಲಕ ಪರಾರಿ| 

ದಾಂಡೇಲಿ(ಡಿ.18): ದಾಂಡೇ​ಲಿ​ಯಿಂದ ಬೆಳ​ಗಾವಿಗೆ ಹೋಗುವ ಮಾರ್ಗ​ದ ತಾವ​ರ​ಗಟ್ಟಿ ಬಳಿ ಲಾರಿ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ ಪರಿ​ಣಾಮ ಇಬ್ಬರು ಮೃತ​ಪಟ್ಟ ಘಟನೆ ಬುಧ​ವಾರ ನಡೆ​ದಿ​ದೆ.

ಮೃತ​ರನ್ನು ಬೆಳ​ಗಾವಿ ಜಿಲ್ಲೆಯ ಹುಕ್ಕೇರಿ ತಾಲೂ​ಕಿನ ಮಾಸ್ತಿ​ಹೊಳೆ ಗ್ರಾಮದ ನಿರ್ವ​ಹ​ಣೆಪ್ಪ ಶಿವಪ್ಪ ಕಮತಿ (26) ಹಿಂಬದಿ ಸವಾ​ರ ಚಂದ್ರ​ಶೇ​ಖರ ಶಿವ​ರು​ದ್ರಪ್ಪ ಕಮ​ತಿ (40) ಎಂದು ಗುರು​ತಿ​ಸ​ಲಾ​ಗಿ​ದೆ. 

ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್‌ ಕಾರ್ಯಕರ್ತರು

ಮೃತರು ವೆಸ್ಟ್‌ ಕೋಸ್ಟ್‌ ಪೇಪರ್‌ಮಿಲ್ಲಿನ ಕಾರ್ಮಿ​ಕ​ರಾ​ಗಿ​ದ್ದ​ರು. ಲಾರಿ ಚಾಲಕ ಪರಾರಿಯಾಗಿದ್ದು, ದಾಂಡೇಲಿಯ ಪೊಲೀಸ್‌ಠಾಣೆಯ ಕ್ರೈಂ ವಿಭಾಗದ ಪಿಎಸ್‌ಐ ಸತ್ಯಪ್ಪ ಹುಕ್ಕೇರಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರೆಸಿದ್ದಾರೆ.
 

PREV
click me!

Recommended Stories

Bhatkal: ಕಪ್ಪೆಚಿಪ್ಪು ತೆಗೆಯಲು ಹೋದ ಒಂದೇ ಕುಟುಂಬದ ಮೂವರು ನೀರುಪಾಲು; 9 ಮಂದಿ ಗಂಭೀರ
ಶಿರಸಿಯಲ್ಲಿ ಕಳೆದ ಎರಡು ತಿಂಗಳ ಹಿಂದಷ್ಟೇ ನಿರ್ಮಾಣವಾಯ್ತು ರಸ್ತೆ; ಆದ್ರೆ, ಒಂದೇ ಮಳೆಗೆ ಹೊಸ ರಸ್ತೆಯೇ ನಾಪತ್ತೆ!