ಹಗರಿಬೊಮ್ಮನಹಳ್ಳಿ: ತೆಪ್ಪ ಮಗುಚಿ ಮದು​ಮಗ ಸೇರಿ ಇಬ್ಬರ ದುರ್ಮರಣ

Published : Jun 08, 2020, 08:23 AM IST
ಹಗರಿಬೊಮ್ಮನಹಳ್ಳಿ: ತೆಪ್ಪ ಮಗುಚಿ ಮದು​ಮಗ ಸೇರಿ ಇಬ್ಬರ ದುರ್ಮರಣ

ಸಾರಾಂಶ

ತೆಪ್ಪ ಮಗುಚಿ ನೀರುಪಾಲಾದ ಇಬ್ಬರು ಯುವಕರು|ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರಾ ಹಿನ್ನೀರಿನಲ್ಲಿ ನಡೆದ ಘಟನೆ| ತೆಪ್ಪದಲ್ಲಿ ಬೈಕ್‌ ಹಾಕಿಕೊಂಡು ನದಿ ದಾಟುತ್ತಿದ್ದಾಗ ಆಯತಪ್ಪಿ ತೆಪ್ಪ ಮಗುಚಿ ಬಿದ್ದು ನಡೆದ ದುರ್ಘಟನೆ| 

ಹಗರಿಬೊಮ್ಮನಹಳ್ಳಿ(ಜೂ.08): ಸ್ನೇಹಿತನ ಜೊತೆ ತನ್ನ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ತೆರಳುತ್ತಿದ್ದಾಗ ತೆಪ್ಪ ಮಗುಚಿ ಇಬ್ಬರೂ ನೀರುಪಾಲಾದ ಘಟನೆ ಭಾನುವಾರ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರಾ ಹಿನ್ನೀರಿನಲ್ಲಿ ನಡೆದಿದೆ. 

ಮೃತರನ್ನ ಫಕ್ರುದ್ಧೀನ್‌(28) ಹಾಗೂ ಹೊನ್ನೂರ್‌ಸಾಬ್‌(18) ಎಂದು ಗುರುತಿಸಲಾಗಿದೆ. 

ಕಂಪ್ಲಿ: ಹೆಂಡ್ತಿ ಕೊಲೆಗೈದ ಆರೋಪ, ನೇಣಿಗೆ ಶರಣಾದ ಗಂಡ

ತಾಲೂಕಿನ ಸೀಗೇನಹಳ್ಳಿ 1ನೇ ಕಾಲೋನಿಯ ಯುವಕ ಫಕ್ರುದ್ಧೀನ್‌(28) ವಿವಾಹ ಜೂ.14ರಂದು ನಿಗ​ದಿ​ಯಾ​ಗಿ​ತ್ತು. ಈ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಗಳನ್ನು ಸಂಬಂಧಿಗಳಿಗೆ ಕೊಡಲು ಸ್ನೇಹಿತ ಹೊನ್ನೂರ್‌ಸಾಬ್‌(18)ನ ಜತೆಗೆ ಕರೆದುಕೊಂಡು ತೆಪ್ಪದಲ್ಲಿ ಬೈಕ್‌ ಹಾಕಿಕೊಂಡು ನದಿ ದಾಟುತ್ತಿದ್ದಾಗ ಆಯತಪ್ಪಿ ತೆಪ್ಪ ಮಗುಚಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
 

PREV
click me!

Recommended Stories

28 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ, 'ಇದು ಸೂಕ್ತ ಸಮಯವಲ್ಲ' ವಾರ್ನಿಂಗ್‌ ನೀಡಿದ IMD
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?