ದಾವಣಗೆರೆ: ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲೇ ನಿಧಿಗಾಗಿ ಶೋಧ..!

By Kannadaprabha NewsFirst Published Aug 17, 2019, 2:57 PM IST
Highlights

ಸೋಶಿಯಲ್ ಮೀಡಿಯಾದಲ್ಲಿ ಹರಿಹರ ನಗರದ ತೆಗ್ಗಿನಕೇರಿ ಬಡಾವಣೆಯ ವಿಶ್ವನಾಥ್ ಭೂತೆ ಮನೆ ಹಿಂಭಾಗ ನಿಧಿ ಇದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಜನರ ಸಂಶಯವನ್ನು ನಿವಾರಿಸಲು ಎಸ್‌ಪಿ ಸಮ್ಮುಖದಲ್ಲಿಯೇ ಗುಂಡಿ ತೆಗೆದು ಪರಿಶೀಲಿಸಲಾಗುತ್ತಿದೆ.

ದಾವಣಗೆರೆ(ಆ.17): ಹರಿಹರ ನಗರದ ತೆಗ್ಗಿನಕೇರಿ ಬಡಾವಣೆಯ ವಿಶ್ವನಾಥ್ ಭೂತೆ ಮನೆ ಹಿಂಭಾಗ ನಿಧಿ ಇದೆ ಎಂದು ಕೆಲವರು ಸಾಮಾಜಿ ಜಾಲತಾಣದಲ್ಲಿ ಮಾಹಿತಿ ಹಾಕಿರುವ ಕಾರಣ ಎಸ್ ಪಿ ಅವರು ತಾಲ್ಲೂಕು ಪೊಲೀಸ್ ಇಲಾಖೆಗೆ ಸತ್ಯಾಂಶವನ್ನು ತಿಳಿಯಲು ತಾಹಸೀಲ್ದಾರ್ ಸಮ್ಮುಖದಲ್ಲಿ ಗುಂಡಿ ತೆಗೆಸಿ ಪರಿಶೀಲಿಸಲಾಗುತ್ತಿದೆ.

ಈ ಭಾಗದಲ್ಲಿ ಹಗೇವು ಇದೆ. ಹಿಂದಿನ ಕಾಲದಲ್ಲಿ ರೈತರು ಬೆಳೆದ ಅಕ್ಕಿ . ಜೋಳ ರಾಗಿ ಹಾಗೂ ಇತರೆ ದವಸ ಧಾನ್ಯಗಳನ್ನು ಸಂಗ್ರಹಿಸಿಡಲು ಈ ಹಗೇವ್ ಗಳನ್ನು ಮಾಡಿಸಲಾಗುತ್ತಿತ್ತು. ಗುಂಡಿಯನ್ನು ನೋಡಿ ನಿಧಿ ಇರಬಹುದೆಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: ನೆರೆ ಸಂತ್ರಸ್ತರಿಗೆ 15,000 ರೊಟ್ಟಿ ವಿತರಣೆ

ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಶೋಧನೆ ನಡೆಯುತ್ತಿದೆ. ಆದರೆ ಯಾವುದೇ ನಿಧಿ ಸಿಕ್ಕಿಲ್ಲ

click me!