ದಾವಣಗೆರೆ: ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲೇ ನಿಧಿಗಾಗಿ ಶೋಧ..!

Published : Aug 17, 2019, 02:57 PM IST
ದಾವಣಗೆರೆ: ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲೇ ನಿಧಿಗಾಗಿ ಶೋಧ..!

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಹರಿಹರ ನಗರದ ತೆಗ್ಗಿನಕೇರಿ ಬಡಾವಣೆಯ ವಿಶ್ವನಾಥ್ ಭೂತೆ ಮನೆ ಹಿಂಭಾಗ ನಿಧಿ ಇದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಜನರ ಸಂಶಯವನ್ನು ನಿವಾರಿಸಲು ಎಸ್‌ಪಿ ಸಮ್ಮುಖದಲ್ಲಿಯೇ ಗುಂಡಿ ತೆಗೆದು ಪರಿಶೀಲಿಸಲಾಗುತ್ತಿದೆ.

ದಾವಣಗೆರೆ(ಆ.17): ಹರಿಹರ ನಗರದ ತೆಗ್ಗಿನಕೇರಿ ಬಡಾವಣೆಯ ವಿಶ್ವನಾಥ್ ಭೂತೆ ಮನೆ ಹಿಂಭಾಗ ನಿಧಿ ಇದೆ ಎಂದು ಕೆಲವರು ಸಾಮಾಜಿ ಜಾಲತಾಣದಲ್ಲಿ ಮಾಹಿತಿ ಹಾಕಿರುವ ಕಾರಣ ಎಸ್ ಪಿ ಅವರು ತಾಲ್ಲೂಕು ಪೊಲೀಸ್ ಇಲಾಖೆಗೆ ಸತ್ಯಾಂಶವನ್ನು ತಿಳಿಯಲು ತಾಹಸೀಲ್ದಾರ್ ಸಮ್ಮುಖದಲ್ಲಿ ಗುಂಡಿ ತೆಗೆಸಿ ಪರಿಶೀಲಿಸಲಾಗುತ್ತಿದೆ.

ಈ ಭಾಗದಲ್ಲಿ ಹಗೇವು ಇದೆ. ಹಿಂದಿನ ಕಾಲದಲ್ಲಿ ರೈತರು ಬೆಳೆದ ಅಕ್ಕಿ . ಜೋಳ ರಾಗಿ ಹಾಗೂ ಇತರೆ ದವಸ ಧಾನ್ಯಗಳನ್ನು ಸಂಗ್ರಹಿಸಿಡಲು ಈ ಹಗೇವ್ ಗಳನ್ನು ಮಾಡಿಸಲಾಗುತ್ತಿತ್ತು. ಗುಂಡಿಯನ್ನು ನೋಡಿ ನಿಧಿ ಇರಬಹುದೆಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: ನೆರೆ ಸಂತ್ರಸ್ತರಿಗೆ 15,000 ರೊಟ್ಟಿ ವಿತರಣೆ

ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಶೋಧನೆ ನಡೆಯುತ್ತಿದೆ. ಆದರೆ ಯಾವುದೇ ನಿಧಿ ಸಿಕ್ಕಿಲ್ಲ

PREV
click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?