ಅಕ್ರಮ ಮರಳು ಸಾಗಣೆ: ಇಂಜಿನ್‌ ಟ್ರೇಲ​ರ್‌ ಮಧ್ಯೆ ಸಿಲುಕಿ ಚಾಲಕನ ದುರ್ಮರಣ

Kannadaprabha News   | Asianet News
Published : May 25, 2020, 08:08 AM IST
ಅಕ್ರಮ ಮರಳು ಸಾಗಣೆ: ಇಂಜಿನ್‌ ಟ್ರೇಲ​ರ್‌ ಮಧ್ಯೆ ಸಿಲುಕಿ ಚಾಲಕನ ದುರ್ಮರಣ

ಸಾರಾಂಶ

ಟ್ರ್ಯಾಕ್ಟರ್‌ ಇಂಜಿನ್‌ ಮೇಲೆದ್ದು ಟ್ರೇಲ​ರ್‌ಗೆ ಬಡಿ​ದು ಮಧ್ಯ​ದಲ್ಲಿ ಸಿಲುಕಿ ಚಾಲಕ ಸಾವು| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮಸಾಗರದ ಬಳಿ ನಡೆದ ಘಟನೆ| ಗದಗ ಜಿಲ್ಲೆ ರೋಣ ತಾಲೂಕಿನ ಹಳ್ಳಗಳಿಂದ ಮರಳುನ್ನು ತೆಗೆದುಕೊಂಡು ಮಾಲಗಿತ್ತಿ ಮಾರ್ಗವಾಗಿ ಹೋಗುತ್ತಿದ್ದಾಗ ದಿಬ್ಬ ತಾಗಿ ಟ್ರ್ಯಾಕ್ಟರ್‌ ಎಂಜಿನ್‌ ಮೇಲೆ ಎದ್ದು ನಡೆದ ದುರ್ಘಟನೆ|

ಹನುಮಸಾಗರ(ಮೇ.25): ಅಕ್ರಮವಾಗಿ ಮರಳು ಸಾಗಿಸು​ತ್ತಿ​ದ್ದ ವೇಳೆ ಟ್ರ್ಯಾಕ್ಟರ್‌ ಇಂಜಿನ್‌ ಮೇಲೆದ್ದು ಟ್ರೇಲ​ರ್‌ಗೆ ಬಡಿ​ದು ಮಧ್ಯ​ದಲ್ಲಿ ಸಿಲುಕಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಮಾಲಗಿತ್ತಿ ಗ್ರಾಮದ ಬಳಿ ಭಾನುವಾರ ನಡೆದಿದೆ.

ಗದಗ ಜಿಲ್ಲೆ ರೋಣ ತಾಲೂಕಿನ ಗುಳಗುಳಿ ಗ್ರಾಮದ ದೇವೇಂದ್ರಪ್ಪ ಮಲ್ಲಿಕಾರ್ಜುನ ಸಿಗ್ಲಿ (35) ಮೃತ ದುರ್ದೈವಿ. ರೋಣ ತಾಲೂಕಿನ ಹಳ್ಳಗಳಿಂದ ಮರಳುನ್ನು ತೆಗೆದುಕೊಂಡು ಮಾಲಗಿತ್ತಿ ಮಾರ್ಗವಾಗಿ ಹೋಗುತ್ತಿದ್ದಾಗ ದಿಬ್ಬ ತಾಗಿ ಟ್ರ್ಯಾಕ್ಟರ್‌ ಎಂಜಿನ್‌ ಮೇಲೆ ಎದ್ದು ಟ್ರೇಲ​ರ್‌ಗೆ ಬಡಿ​ದಿ​ದೆ. 

ಲಾಕ್‌ಡೌನ್‌: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್‌ ಪೊಲೀಸ್‌ ಠಾಣೆ, ನಿತ್ಯ ದಾಸೋಹ

ಸ್ಟೇರಿಂಗ್‌ ಬಡಿದು ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಸ್ಥಳಕ್ಕೆ ಹನುಮಸಾಗರ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!