ಗುಡ್ಡಕ್ಕೆ‌ ಗುದ್ದಿದ ಕಾರು: ಮೂರು ಸಾವು, ಏಳು ಮಂದಿ ಗಂಭೀರ

Published : Nov 13, 2018, 11:47 AM IST
ಗುಡ್ಡಕ್ಕೆ‌ ಗುದ್ದಿದ ಕಾರು: ಮೂರು ಸಾವು, ಏಳು ಮಂದಿ ಗಂಭೀರ

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಆರೋಲ್ಲಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ. ಫಾತೀಮಾ(65), ರುಬಿಯಾ(45) ಹಾಗೂ ಚಾಬು ಸಾಬ್ ಮೃತರೆಂದು ಗುರುತಿಸಲಾಗಿದೆ. ಇವರೆಲ್ಲರೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಗ್ರಾಮದವರಾಗಿದ್ದು, ಗೋವಾಕ್ಕೆ ಮದುವೆಗೆಂದು ತೆರಳಿ ವಾಪಾಸ್ ಊರಿಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಹೊನ್ನಾವರ[ನ.13]: ಕಾರೊಂದು ಗುಡ್ಡಕ್ಕೆ ಗುದ್ದಿದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಸಾವನಪ್ಪಿದ್ದು, ಏಳು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಆರೋಲ್ಲಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ. ಫಾತೀಮಾ(65), ರುಬಿಯಾ(45) ಹಾಗೂ ಚಾಬು ಸಾಬ್ ಮೃತರೆಂದು ಗುರುತಿಸಲಾಗಿದೆ. ಇವರೆಲ್ಲರೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಗ್ರಾಮದವರಾಗಿದ್ದು, ಗೋವಾಕ್ಕೆ ಮದುವೆಗೆಂದು ತೆರಳಿ ವಾಪಾಸ್ ಊರಿಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಅಪಘಾತದಲ್ಲಿ ಏಳು ಮಂದಿಗೆ ಗಂಭೀರ ಗಾಯಗಳಾಗಿದ್ದು, ಇವರೆಲ್ಲರನ್ನೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಕಮಲಾಕರ್‌ ಭಟ್‌ನಿಂದ ನನಗೆ ಮಾರಕ ಕಾಯಿಲೆ ಬಂತು, ಇನ್ನು ಸುಚಿತ್ರಾ ಕಥೆ ಏನೋ! ಬುರ್ಕಾದಾರಿ ಮಹಿಳೆ ಅಳಲು
ಜೈಲಲ್ಲೇ ವ್ಯಾಲಂಟೈನ್‌ ಡೇ ಆಚರಿಸಲಿರುವ ಅನೈತಿಕ ಪ್ರೇಮಿಗಳು; ಕಮಲಾಕರ್‌, ಸುಚಿತ್ರಾಗೆ ಕೋರ್ಟ್‌ ಶಾಕ್‌!