ತಲಕಾವೇರಿಯಲ್ಲಿ ತೀರ್ಥರೂಪದಲ್ಲಿ ಕಾವೇರಿ ದರ್ಶನ : ಒಂದು ತಿಂಗಳು ಜಾತ್ರೆ

Suvarna News   | Asianet News
Published : Oct 17, 2020, 08:33 AM IST
ತಲಕಾವೇರಿಯಲ್ಲಿ ತೀರ್ಥರೂಪದಲ್ಲಿ ಕಾವೇರಿ ದರ್ಶನ :    ಒಂದು ತಿಂಗಳು ಜಾತ್ರೆ

ಸಾರಾಂಶ

ಇಂದಿನಿಂದ ಒಂದು ತಿಂಗಳ ಕಾಲ ತಲಕಾವೇರಿಯಲ್ಲಿ ಜಾತ್ರೆ ನಡೆಯಲಿದೆ.  ಇಂದು ಬೆಳಗ್ಗೆ 7 ಗಂಟೆ 04 ನಿಮಿಷಕ್ಕೆ ಕುಂಡಿಕೆಯಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ.  ತೀರ್ಥೋದ್ಭವದ ಸಂದರ್ಭ ಪ್ರಮುಖರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 

 ಮಡಿಕೇರಿ (ಅ.17):  ಕನ್ನಡ ನಾಡಿನ ಜೀವನದಿ, ಕೊಡಗಿನ ಜನರ ಕುಲ ದೇವತೆ ಕಾವೇರಿ ತವರು ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿದೆ. 

ಇಂದಿನಿಂದ ಒಂದು ತಿಂಗಳ ಕಾಲ ಜಾತ್ರೆ ನಡೆಯಲಿದೆ.  ಇಂದು ಬೆಳಗ್ಗೆ 7 ಗಂಟೆ 04 ನಿಮಿಷಕ್ಕೆ ಕುಂಡಿಕೆಯಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ. 
 ತೀರ್ಥೋದ್ಭವದ ಸಂದರ್ಭ ಪ್ರಮುಖರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 

ಕೊರೋನಾ ಪರಿಣಾಮ ಈ ಬಾರಿ ಪವಿತ್ರ ಕುಂಡಿಕೆ ಬಳಿ ತೀರ್ಥ ನೀಡುತ್ತಿಲ್ಲ. ಬದಲಾಗಿ ಇದಕ್ಕಾಗಿ 30 ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಇವರು ತೀರ್ಥ ವಿತರಣೆ ಮಾಡಲಿದ್ದು, ಪ್ರೋಕ್ಷಣೆ ಕೂಡ ಮಾಡಲಿದ್ದಾರೆ.

ತಲಕಾವೇರಿಯಲ್ಲಿ 1000 ವರ್ಷದ ಶಿವಲಿಂಗ ಭಗ್ನ : ವಿಸರ್ಜನೆಗೆ ಮನವಿ ...

ಕೊರೋನಾ ಸೋಂಕಿನ ಪರಿಣಾಮ ಈ ಬಾರಿ ಸರಳ ರೀತಿಯಲ್ಲಿ ಜಾತ್ರೆ ನಡೆಯಲಿದೆ. ತಲಕಾವೇರಿ ಹಾಗೂ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಿಂದ ಬ್ಯಾರಿಕೇಡ್‌ ಹಾಕಲಾಗಿದೆ.

ಇಂದು  ಪಿಂಡ ಪ್ರದಾನ ಕಾರ್ಯಕ್ಕೆ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿದೆ. ತುಲಾ ಸಂಕ್ರಮಣ ಜಾತ್ರಾ ವಿಶೇಷ ಪೂಜಾ ಕಾರ್ಯವು ಇಂದಿನಿಂದ ನ. 17 ರವರೆಗೆ ಒಂದು ತಿಂಗಳು ಜರುಗಲಿದ್ದು, ಭಕ್ತಾದಿಗಳು ಈ ಸಮಯದಲ್ಲಿ ಆಗಮಿಸಿ ಪೂಜಾ ಕಾರ್ಯ ಕೈಗೊಳ್ಳಬಹುದಾಗಿದೆ.

ಹೆಚ್ಚುವರಿ ಬಸ್‌ ವ್ಯವಸ್ಥೆ ಇಲ್ಲ. ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿಲ್ಲ. ಮಳೆ ಬಂದಿರುವ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಇಳಿಯುವಂತಿಲ್ಲ.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ