ಹಲ್ಲೆ ಮಾಡಿದ್ದ ರಾಜಾಜಿನಗರ ಪೊಲೀಸರಿಗೆ 1 ಲಕ್ಷ ರೂ. ದಂಡ

Published : Sep 07, 2018, 08:27 PM ISTUpdated : Sep 09, 2018, 10:03 PM IST
ಹಲ್ಲೆ ಮಾಡಿದ್ದ ರಾಜಾಜಿನಗರ ಪೊಲೀಸರಿಗೆ 1 ಲಕ್ಷ ರೂ.  ದಂಡ

ಸಾರಾಂಶ

2015ರ ಎಪ್ರಿಲ್ 6 ರಂದು ರವೀಂದ್ರರಾಮನ್ ಎಂಬುವರನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ 10 ಸಾವಿರ ರೂ. ಪಡೆದು ಅವರನ್ನು ಬಿಟ್ಟುಕಳಿಸಿದ್ದರು

ಬೆಂಗಳೂರು[ಸೆ.07]: ರಾಜಾಜಿನಗರ ಪೊಲೀಸರು ವ್ಯಕ್ತಿಯೊಬ್ಬನಿಗೆ ವಿನಾಕಾರಣ ಹಲ್ಲೆ ಮಾಡಿದ್ದಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ದಂಡ ವಿಧಿಸಿದೆ.

2015ರ ಎಪ್ರಿಲ್ 6 ರಂದು ರವಿಂದ್ರರಾಮನ್ ಎಂಬ ವ್ಯಕ್ತಿಯನ್ನು ವಿನಾ ಕಾರಣ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದರು. ಇದರ ವಿಚಾರಣೆಯನ್ನು ರಾಜ್ಯ ಮಾನವ ಹಕ್ಕು ಆಯೋಗ ನಡೆಸುತ್ತಿತ್ತು. ಇದೀಗ ರಾಜಾಜಿನಗರದ ಅಂದಿನ ಇನ್ಸ್ ಪೆಕ್ಟರ್ ರಮೇಶ್,  ಪಿಎಸ್ ಐ ಮಂಜು, ರಾಮಯ್ಯ ಹಾಗೂ ಸಿಬ್ಬಂದಿಗಳಾದ ರಾಮಯ್ಯ ರಮೇಶ್ ಎಂಬುವರಿಗೆ 1 ಲಕ್ಷ ರೂ. ದಂಡ ವಿಧಿಸಿದೆ. 

2015ರ ಎಪ್ರಿಲ್ 6 ರಂದು ರವೀಂದ್ರರಾಮನ್ ಎಂಬುವರನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ 10 ಸಾವಿರ ರೂ. ಪಡೆದು ಅವರನ್ನು ಬಿಟ್ಟುಕಳಿಸಿದ್ದರು. ಈ ಬಗ್ಗೆ ರವೀಂದ್ರರಾಮನ್ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ನೀಡಿದ್ದರು. ಇದೀಗ ಪೊಲೀಸರಿಗೆ ದಂಡ ವಿಧಿಸಿ ಆದೇಶ
ಹೊರಡಿಸಿದೆ.

 

PREV
click me!

Recommended Stories

ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಡೀತಿದೆಯಾ ಕಿಡ್ನಿ ಮಾಫಿಯಾ? ಆಪರೇಷನ್ ವೇಳೆ ಗಂಡ ಸಾವು, ಕಿಡ್ನಿ ಕೊಟ್ಟ ಪತ್ನಿಗೆ ತಿಳಿದೇ ಇಲ್ಲ!
Karnataka Budget 2026–27: ಮೊತ್ತ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ