ಶಿರೂರು ಗುಡ್ಡ ಆಯ್ತು, ಈಗ ಹಾಸನದ ಶಿರಾಡಿ ಘಾಟ್ ರಸ್ತೆ ಕುಸಿತ; ಸಾಲುಗಟ್ಟಿ ನಿಂತ ವಾಹನಗಳು

Published : Jul 29, 2024, 03:18 PM IST
ಶಿರೂರು ಗುಡ್ಡ ಆಯ್ತು, ಈಗ ಹಾಸನದ ಶಿರಾಡಿ ಘಾಟ್ ರಸ್ತೆ ಕುಸಿತ; ಸಾಲುಗಟ್ಟಿ ನಿಂತ ವಾಹನಗಳು

ಸಾರಾಂಶ

ಶಿರೂರು ಗುಡ್ಡ ಕುಸಿತದ ತೆರವು ಕಾರ್ಯಾಚರಣೆಯೇ ಮುಗಿದಿಲ್ಲ. ಅಷ್ಟರೊಳಗೆ ಹಾಸನ ಜಿಲ್ಲೆಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆ ಕುಸಿತವಾಗಿದೆ. 

ಹಾಸನ (ಜು.29): ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದ ತೆರವು ಕಾರ್ಯಾಚರಣೆಯೇ ಮುಗಿದಿಲ್ಲ. ಅಷ್ಟರೊಳಗೆ ಹಾಸನ ಜಿಲ್ಲೆಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆ ಕುಸಿತವಾಗಿದೆ. 

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಆರಂಭವಾಗಿದೆ. ಶಿರಾಡಿಘಾಟ್ ರಸ್ತೆ 75 ರಲ್ಲಿ ಮತ್ತೆ ಭೂಕುಸಿತವಾಗಿದೆ. ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಲು ಬಳಿ ಮತ್ತೆ ಭೂಕುಸಿತ ಆಗಿದ್ದು, ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕಾಂಕ್ರಿಟ್ ರಸ್ತೆ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯ ಸಿಬ್ಬಂದಿ ಮಣ್ಣು ತೆರವುಗೊಳಿಸುತ್ತಿದ್ದಾರೆ. ಗುತ್ತಿಗೆದಾರ ಹಾಗೂ ಸರ್ಕಾರದ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಮಣ್ಣು ತೆರವು ಮಾಡುತ್ತಿದ್ದು, ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ವಿಳಂಬವಾಗುತ್ತಿದೆ. 

ಕನ್ನಡ ನಾಡಿನ ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಊಟದ ತಟ್ಟೆ; ಡಿಸಿಎಂ ಡಿ.ಕೆ. ಶಿವಕುಮಾರ್

ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಮಾಡುವುದನ್ನು ಬೇಸಿಗೆ ಕಾಲದಲ್ಲಿ ಮಾಡಬೇಕು. ಆದರೆ, ಬೇಸಿಗೆಯಲ್ಲಿ ಕೆಲಸ ಮಾಡುವುದು ಬಿಟ್ಟು ಮಳೆಗಾಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ. ಮಣ್ಣು ಕುಸಿಯುವ ಭಯದಲ್ಲೇ ಸಂಚರಿಸಬೇಕಿದೆ. ಕೆಲವು ವಾಹನಗಳು ಬ್ರೇಕ್ ಹಿಡಿಯುವುದಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಲಿ ಎಂದು ವಿಡಿಯೋ ಮೂಲಕ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

PREV
click me!

Recommended Stories

ನಟ ದರ್ಶನ್‌ಗೆ ಶುರುವಾಯ್ತು ಟೆನ್ಶನ್, ನಾಳೆ ಸಂಜೆ 4 ಗಂಟೆ ಆದೇಶ ಪ್ರಕಟಿಸಲಿದೆ ಹೈಕೋರ್ಟ್
Health Department: ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!