ಸಾವಿನಲ್ಲೂ ಒಂದಾದ ಅಣ್ಣ, ತಮ್ಮ: ಗ್ರಾಮದಲ್ಲಿ ನೀರವ ಮೌನ

Suvarna News   | Asianet News
Published : Mar 19, 2021, 10:14 PM ISTUpdated : Mar 20, 2021, 10:20 AM IST
ಸಾವಿನಲ್ಲೂ ಒಂದಾದ ಅಣ್ಣ, ತಮ್ಮ: ಗ್ರಾಮದಲ್ಲಿ ನೀರವ ಮೌನ

ಸಾರಾಂಶ

ಮೃತಪಟ್ಟಿದ್ದ ತಮ್ಮನ ಅಂತಿಮ ವಿಧಿ-ವಿಧಾನ ಕಾರ್ಯ ಮುಗಿಸಿ ವಾಪಸ್ ಮನೆಗೆ ಆಗಮಿಸುತ್ತಿದ್ದ ವೇಳೆ ಅಣ್ಣನೂ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬಳ್ಳಾರಿ, (ಮಾ.19): ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಸಹೋದರಿಬ್ಬರು ಸಾವಿನಲ್ಲಿ ಒಂದಾದ ದುರಂತ ಘಟನೆ ನಡೆದಿದೆ. ಕೆ.ಸಿದ್ದೇಶ(22) ಎನ್ನುವ ಯುವಕ ಕೈಗಾರಿಕೆ ಇಂಡಷ್ಟ್ರಿಯೊಂದರಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನಿಗೆ ಗುರುವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾನೆ.

ಈ ಸುದ್ದಿ ತಿಳಿದ ಬೆಂಗಳೂರಿನಲ್ಲಿ ಅಭಿಯಂತರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಹೋದರ ದೊಡ್ಡಬಸವ(25)ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ್ದಾನೆ. ತಮ್ಮನ ವಿಧಿ-ವಿಧಾನ ಕಾರ್ಯ ಮುಗಿಯುವರೆಗೂ ಜತೆಗಿದ್ದು, ಸ್ಮಶಾನದಿಂದ ಮರಳಿ ಮನೆಗೆ ಬರುವ ಸಮಯದಲ್ಲಿ ಈ ಯುವಕನಿಗೆ ಹೃದಯಘಾತವಾಗಿದೆ. ಆದ್ರೆ ಅವರನ್ನ ಬಳ್ಳಾರಿಯ ವಿಮ್ಸ್​ ಆಸ್ಪತ್ರೆಗೆ ದಾಖಲು  ಮಾಡುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಆತ್ಮಹತ್ಯೆ: ಸಾವಿನಲ್ಲೂ ಒಂದಾದ ದಂಪತಿ 

ಗ್ರಾಮದ ಬಸಪ್ಪ ಮತ್ತು ದುರ್ಗಮ್ಮ ದಂಪತಿಗಳ ಮಕ್ಕಳಾಗಿದ್ದು, ಇವರಿಗೆ ಮೂರು ಗಂಡು ಮಕ್ಕಳಿದ್ದಾರೆ.ಈ ಪೈಕಿ ಇವರ ಹಿರಿಯ ಮಗ ಕೆಂಚಪ್ಪ ಎಂಬಂತಾನು ತಮ್ಮಂದಿರನ್ನು ಕಳೆದುಕೊಂಡಿರುವ ದು:ಖದಲ್ಲಿ ಚಿಂತಾಕ್ರಾಂತನಾಗಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಹೋದರರಿಬ್ಬರ ಸಾವಿಗೆ ಇಡೀ ಗ್ರಾಮವೇ ಮರುಕ ಪಡುತ್ತಿದೆ. ಅದರಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವ್ಯವಸಾಯ ನಂಬಿ ಜೀವನ ಸಾಗಿಸುತ್ತಿರುವ ಈ ದಂಪತಿಗೆ ಮಕ್ಕಳೇ ಆಧಾರವಾಗಿದ್ದರು. ಆದರೆ, ಜವರಾಯ ಮೂವರು ಸಹೋದರಲ್ಲಿ ಇಬ್ಬರನ್ನು ಒಂದೇ ದಿನ ಬಲಿ ಪಡೆದು ಕುಟುಂಬಕ್ಕೆ ಆಘಾತ ನೀಡಿದ್ದಾನೆ.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ