ಕಲಬುರಗಿ: ರಾತೋ ರಾತ್ರಿ ಸಿದ್ದರಾಮಯ್ಯ ವೃತ್ತ ನಿರ್ಮಾಣ, ಸಾರ್ವಜನಿಕರ ಆಕ್ರೋಶ

Published : Sep 17, 2023, 09:06 AM ISTUpdated : Sep 17, 2023, 09:08 AM IST
ಕಲಬುರಗಿ: ರಾತೋ ರಾತ್ರಿ ಸಿದ್ದರಾಮಯ್ಯ ವೃತ್ತ ನಿರ್ಮಾಣ, ಸಾರ್ವಜನಿಕರ ಆಕ್ರೋಶ

ಸಾರಾಂಶ

ಸಿದ್ದರಾಮಯ್ಯ ವೃತ್ತದ ಬಳಿ ಸಿಎಂ ಸಿದ್ದರಾಮಯ್ಯರ ಸ್ವಾಗತ ಕಟೌಟ್‌ಗಳು ರಾರಾಜಿಸುತ್ತಿವೆ. ಮಹಾನಗರ ಪಾಲಿಕೆ ಪರವಾನಿಗೆ ಪಡೆಯದೇ ವೃತ್ತ ನಿರ್ಮಾಣಕ್ಕೆ ಸಾರ್ವಜನಿಕರ ಆಕ್ರೋಶ.

ಕಲಬುರಗಿ(ಸೆ.17): ಸಿಎಂ ಸಿದ್ದರಾಮಯ್ಯ ವೃತ್ತ ರಾತೋ ರಾತ್ರಿ ನಿರ್ಮಾಣವಾಗಿದೆ. ಹೌದು, ಕಲಬುರಗಿ ನಗರದ ಹೈಕೋರ್ಟ್ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ವೃತ್ತ ನಿರ್ಮಾಣವಾಗಿದೆ. 

ಕಲಬುರಗಿ ನಗರದಿಂದ ಅಫಜಲಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಿದ್ದರಾಮಯ್ಯ ವೃತ್ತ ನಿರ್ಮಾಣವಾಗಿದೆ. ಇಂದು(ಭಾನುವಾರ) ನಗರದ ಹೈಕೋರ್ಟ್ ಬಳಿ ಶಾಂತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಹೀಗಾಗಿ ದಿಢೀರ್‌ ಅಂತ ಸಿಎಂ ಸಿದ್ದರಾಮಯ್ಯ ವೃತ್ತ ರಾತೋ ರಾತ್ರಿ ನಿರ್ಮಾಣ ಮಾಡಲಾಗಿದೆ. 

ಇಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನ: ಸಿಎಂ ಧ್ವಜಾರೋಹಣ

ಸಿದ್ದರಾಮಯ್ಯ ವೃತ್ತದ ಬಳಿ ಸಿಎಂ ಸಿದ್ದರಾಮಯ್ಯರ ಸ್ವಾಗತ ಕಟೌಟ್‌ಗಳು ರಾರಾಜಿಸುತ್ತಿವೆ. ಮಹಾನಗರ ಪಾಲಿಕೆ ಪರವಾನಿಗೆ ಪಡೆಯದೇ ವೃತ್ತ ನಿರ್ಮಾಣಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

PREV
Read more Articles on
click me!

Recommended Stories

ಸುಳ್ಳು ಆರೋಪ ಮಾಡಿದರೆ ಒದ್ದು ಒಳಗೆ ಹಾಕಬೇಕಾಗುತ್ತದೆ: ಸಚಿವ ಎಂ.ಬಿ.ಪಾಟೀಲ್‌
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ