ಬಾಬರ್‌ ಅನುಯಾಯಿಗಳಾದ PFI ಸಂಘಟನೆಯವರು ರಾಕ್ಷಸ ಕುಲದವರು: ಮುತಾಲಿಕ್‌

Kannadaprabha News   | Asianet News
Published : Feb 20, 2021, 01:22 PM ISTUpdated : Feb 20, 2021, 01:45 PM IST
ಬಾಬರ್‌ ಅನುಯಾಯಿಗಳಾದ PFI ಸಂಘಟನೆಯವರು ರಾಕ್ಷಸ ಕುಲದವರು: ಮುತಾಲಿಕ್‌

ಸಾರಾಂಶ

ಪಿಎ​ಫ್‌ಐ ವಿರುದ್ಧ ಮುತಾ​ಲಿಕ್‌ ಆಕ್ರೋ​ಶ| ಹಿಂದೂ ಸಮಾಜ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದೆ| ಆರ್‌ಎಸ್‌ಎಸ್‌ ಬಗ್ಗೆ ಮಾತನಾಡೋರು ನಾಲಾಯಕ್‌| 

ಧಾರವಾಡ(ಫೆ.20): ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವುದು ರಾಮಮಂದಿರವಲ್ಲ. ಅದು ಆರ್‌ಎ​ಸ್‌​ಎಸ್‌ ಮಂದಿರ. ಆದ್ದರಿಂದ ಈ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಬಂಧುಗಳು ದೇಣಿಗೆ ನೀಡಬೇಡಿ ಎಂದು ಪಿಎಫ್‌ಐ ಸಂಘಟನೆ ನೀಡಿದ ಹೇಳಿಕೆಯನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ಖಂಡಿಸಿದ್ದಾರೆ.

ನಗ​ರ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ರಾಮ ಮಂದಿರದ ಪರವಾಗಿ ಮಾತನಾಡಲು ಯಾವ ಅರ್ಹತೆ ಇಲ್ಲ. ಬಾಬರ್‌ ಅನುಯಾಯಿಗಳಾದ ನೀವು ರಾಕ್ಷಸ ಕುಲದವರು. ಅಶಾಂತಿಯನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ ಎಂದು ಹೇಳಿದ್ದು ನೀವು ಕೊಲೆಗಡುಕರು, ನಾಲಾಯಕರು. ರಾಕ್ಷಸನ ಬಾಯಲ್ಲಿ ಭಗವದ್ಗೀತೆ ಬಂದಂಗಾಗಿದೆ ಎಂದು ಕಿಡಿ​ಕಾ​ರಿ​ದ್ದಾ​ರೆ.

'ರೈತರ ಸಾಲ ಮರುಪಾವತಿಗೆ ನೋಟಿಸ್‌ ನೀಡಿ​ದ್ರೆ ಬ್ಯಾಂಕ್‌ಗೆ ಬೀಗ'

ಸುಪ್ರೀಂಕೋರ್ಟ್‌ ಈ ಕುರಿತು ತೀರ್ಪು ನೀಡಿದ್ದು ಸರ್ಕಾರದ ವತಿಯಿಂದ ಟ್ರಸ್ಟ್‌ ರಚನೆ ಸಹ ಆಗಿದೆ. ಹಿಂದೂ ಸಮಾಜ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದೆ. ಹೀಗಿರುವಾಗ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡೋರು ನಾಲಾಯಕ್‌ ಎಂದ ಪ್ರಮೋದ್‌ ಮುತಾಲಿಕ್‌ ಕಿಡಿ ಕಾಡಿದರು.
 

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ