ಯಾವುದೇ ವೈರಸ್ ಮನುಷ್ಯನ ಸೋಲಿಸಿಲ್ಲ: ಜನರಿಗೆ ಧೈರ್ಯ ತುಂಬಿದ ಸಚಿವ ಸುಧಾಕರ್..!

Published : May 09, 2020, 04:13 PM IST
ಯಾವುದೇ ವೈರಸ್ ಮನುಷ್ಯನ ಸೋಲಿಸಿಲ್ಲ: ಜನರಿಗೆ ಧೈರ್ಯ ತುಂಬಿದ ಸಚಿವ ಸುಧಾಕರ್..!

ಸಾರಾಂಶ

ರಾಜ್ಯವೇ ಕೊರೋನಾ ಭೀತಿಯಲ್ಲಿರುವಾಗ ಸಚಿವ ಸುಧಾಕರ್ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಯಾವ ವೈರಸ್ ಕೂಡಾ ಮನುಷ್ಯನನ್ನು ಸೋಲಿಸಿಲ್ಲ, ಭಯ ಬೇಡ ಎಂದು ಸಾಂತ್ವನ ಹೇಳಿದ್ದಾರೆ.  

ದಾವಣಗೆರೆ(ಮೇ 09): ರಾಜ್ಯವೇ ಕೊರೋನಾ ಭೀತಿಯಲ್ಲಿರುವಾಗ ಸಚಿವ ಸುಧಾಕರ್ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಯಾವ ವೈರಸ್ ಕೂಡಾ ಮನುಷ್ಯನನ್ನು ಸೋಲಿಸಿಲ್ಲ, ಭಯ ಬೇಡ ಎಂದು ಸಾಂತ್ವನ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಕೊರೊನಾ ಸ್ಯಾಂಪಲ್ ಚೆಕ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಷ್ಟೆ ನನಗೆ ಈ ಬಗ್ಗೆ ಮಾಹಿತಿ ಬಂದಿದೆ. ದಿನಕ್ಕೆ ನಾಲ್ಕರಿಂದ ಐದು ಸಾವಿರ ಜನರ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.

ರಂಝಾನ್ ರೋಝಾ ಮಾಡೋಕೆ ಬಿಡಿ ಎಂದ ಸೋಂಕಿತರು..!

ಕೊರೊನಾ ಬಗ್ಗೆ ಜನರು ಆತಂಕ, ಭಯ ಬಿಡಬೇಕು. ಬೇರೆ ರೋಗಾಣು ರೀತಿಯಲ್ಲೇ ಈ ರೋಗಾಣು ಕೂಡ. ಯಾವುದೇ ವೈರಸ್ ಮನುಷ್ಯನನ್ನು ಸೋಲಿಸಿಲ್ಲ. ಕೊರೊನಾ ಮಾರಕ ಕಾಯಿಲೆ ಅಂತಾ ಭಯ ಪಡುವುದು ಬೇಡ ಎಂದು ಧೈರ್ಯ ತುಂಬಿದ್ದಾರೆ.

ಸಾರ್ಸ್ ಬಂದಾಗ ಶೇಕಡ 10 ರಷ್ಟಿತ್ತು. ಕೊರೊನಾ ಶೇಕಡಾ 3.1 ಅಷ್ಟೇ ಇರುವುದು. 60 ವರ್ಷ ಮೇಲ್ಪಟ್ಟವರು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ.  ಪಾಸಿಟಿವ್ ಬಂದವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.

PREV
click me!

Recommended Stories

PM Kisan : ಈ ಮಹಿಳಾ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ.. ಯಾಕೆ ಗೊತ್ತಾ?
Motor Vehical: ರಸ್ತೆಯಲ್ಲಿ ನಿಮ್ಮ ವಾಹನ ತಡೆದರೆ ತಕ್ಷಣ ದಾಖಲೆ ಕೊಡಬೇಕಾ? ಟ್ರಾಫಿಕ್ ಪೊಲೀಸ್‌-RTO ಅಧಿಕಾರದ ಅಸಲಿ ಸತ್ಯ ಇಲ್ಲಿದೆ!