ಸತ್ತ ವ್ಯಕ್ತಿಯಿಂದ 7 ವರ್ಷಗಳ ನಂತರ ಜಿಪಿಎ, ಆಸ್ತಿ ಕಬಳಿಸಿ ಎಂ ಎಲ್ ಸಿ ಮಂಜೇಗೌಡಗೆ ಮಾರಾಟ!

Published : Jul 30, 2025, 12:49 PM IST
bihar land

ಸಾರಾಂಶ

ಮೈಸೂರಿನಲ್ಲಿ ಮೃತ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆಗೆ ಯತ್ನ ನಡೆದಿದೆ. ಮೃತ ನೀಲಕಂಠ ನರಸಿಂಹ ಶರ್ಮಾ ಹೆಸರಿನಲ್ಲಿ ಜಿಪಿಎ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

DID YOU KNOW ?
ಆಸ್ತಿ ಜಿಪಿಎ ಎಂದರೇನು?
ಆಸ್ತಿಯಲ್ಲಿನ ಜಿಪಿಎ ಎಂದರೆ ಜನರಲ್ ಪವರ್ ಆಫ್ ಅಟಾರ್ನಿ, ಆಸ್ತಿ ವ್ಯವಹಾರಗಳಲ್ಲಿ ಕ್ರಮಗಳನ್ನು ಅಧಿಕೃತಗೊಳಿಸಲು ಅವಕಾಶ. ವ್ಯಕ್ತಿ ಜೀವಂತ ಇರಬೇಕು.

ಮೈಸೂರು : ಭೂಮಿಯನ್ನು ಕಬಳಿಸುವುದರಲ್ಲಿ  ಕುಟುಂಬದ ಜಮೀನು ವಾದದಲ್ಲಿ ಗಂಭೀರ ಘಟನೆ ಒಂದು ನಡೆದಿದೆ. ಮೈಸೂರು ತಾಲೂಕು ಮಂಡಕಹಳ್ಳಿ ಗ್ರಾಮದ ಪತ್ರಪ್ಪ ಎಂಬ ವ್ಯಕ್ತಿಯ 4 ಎಕರೆ 19 ಗುಂಟೆಗಳ ಭೂಮಿಯನ್ನು ಕಬಳಿಸಲು ಸತ್ತು ಹೋದ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಘಟನೆ ನಡೆದಿದೆ. ನೀಲಕಂಠ ನರಸಿಂಹ ಶರ್ಮ ಎಂಬವರು 2018ರಲ್ಲಿ ಮೃತಪಟ್ಟಿದ್ದು, ಅವರ ಮರಣ ಪ್ರಮಾಣಪತ್ರವು ಕೂಡ ಪ್ರಾಯೋಗಿಕ ದಾಖಲೆಯಾಗಿದೆ. ಆದರೆ, ಅವರ ಸಾವಿನ ಆರು ವರ್ಷಗಳ ನಂತರ, 2024 ರಲ್ಲಿ ಅವರ ಹೆಸರಿನಲ್ಲಿ ಜಿಪಿಎ ಮಾಡಲಾಗಿದೆ. ಅವರೇ ಬಂದು ಜಿಪಿಎ ಮಾಡಿಕೊಟ್ಟ ಬಗ್ಗೆ ದಾಖಲೆ ಸೃಷ್ಟಿ ಮಾಡಲಾಗಿದೆ. ಈ ಜಿಪಿಎ ಕುರಿತು ನಕಲಿ ದಾಖಲೆ ಸೃಷ್ಟಿಸಿದ್ದು, ಈ ಮೂಲಕ ಭೂಮಿಯನ್ನು ಕಬಳಿಸುವ ಪ್ರಯತ್ನ ನಡೆದಿದೆ.

ಈ ಕುರಿತು ಅನುಮಾನ ಬಂದ ಪತ್ರಪ್ಪ ಮುದ್ದಿನ ಮೊಮ್ಮಗ ಕಿಶೋರ್ ಅವರು ದಕ್ಷಿಣ ಪೊಲೀಸ್ ಠಾಣೆಗೆ ಭೂಕಬಳಿಕೆ ದೂರು ನೀಡಿದ್ದು, ನಮ್ಮ ತಾತನ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ. ನಮ್ಮ ದೊಡ್ಡಪ್ಪ ಅಂದರೆ ಪತ್ರಪ್ಪ ಮತ್ತೊಬ್ಬ ಮಗ ಪ್ರಭುದೇವ ಅವರಿಂದ ನೀಲಕಂಠ ನರಸಿಂಹ ಶರ್ಮಾ ಅವರ ಆಸ್ತಿ ಮಾರಾಟ ಮಾಡಲಾಗಿದೆ. ಕಿಶೋರ್ ಅಪ್ರಪ್ತಾರಾಗಿರುವಾಗ ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆಂದು ಈ‌ ಬಗ್ಗೆ ಹೈಕೋರ್ಟ್‌ನಲ್ಲಿ ಕಿಶೋರ್ ಪರ ತೀರ್ಪು ಬಂದಿದೆ. ಈ ಸಂಬಂಧ ವಿವೇಕ್ ಕೆ. ಹಟ್ಟಿ, ಸುಮಾ ಜಿ, ಅನಿತಾ ಶೆಟ್ಟಿ, ಪುಷ್ಪಾ ಡಿ ಮತ್ತು ನೀಲಕಂಠ ನರಸಿಂಹ ಶರ್ಮಾ. ಇವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇವರಿಂದ ಭೂಮಿ ಇವರಿಂದ ಎಂ ಎಲ್ ಸಿ ಸಿ.ಎನ್.ಮಂಜೇಗೌಡ, ಶಂಕರ್ ರಾವ್, ಎಸ್ ಸತೀಶ್ ಹಂಚಲ್ಕರ್ ಅವರಿಗೆ ಮಾರಾಟಗೊಂಡಿದೆ ಎನ್ನಲಾಗಿದೆ. ಆದರೆ ತಹಶೀಲ್ದಾರ್ ಖಾತೆ ಮಾಡಿಕೊಟ್ಟಿರುವುದಿಲ್ಲ ಎನ್ನಲಾಗಿದೆ.

ಹೈಕೋರ್ಟ್ ನಲ್ಲಿ ಸಹ ಈ ಪ್ರಕರಣ ಸಂಬಂಧವಾಗಿ ಕಿಶೋರ್ ಪರ ತೀರ್ಪು ಬಂತು. ಸತ್ತುಹೋದ ನೀಲಕಂಠ ನರಸಿಂಹ ಶರ್ಮ ಅವರಿಂದ ಜಿಪಿಎ ಮಾಡಿಸಿಕೊಂಡು ಕಬಳಿಕೆಗೆ ಮುಂದಾದ ಆರೋಪ ವಿವಾದದಲ್ಲಿದೆ. ಈ ಪ್ರಕರಣವು ಸೂಕ್ಷ್ಮ ತನಿಖೆಗೆ ಒಳಪಡುವಂತಾಗಿದೆ ಮತ್ತು ಸಂಬಂಧಿತರ ಹಿರಿಯ ನ್ಯಾಯಾಂಗ ಕ್ರಮಗಳು ಹೆಚ್ಚುವರಿ ಸ್ಪಷ್ಟತೆ ಒದಗಿಸುವಲ್ಲಿ ನಿರೀಕ್ಷಿಸಲಾಗಿದೆ.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ; ಶಾಸ್ತ್ರಬದ್ಧ ಸಂಪ್ರದಾಯ ಆಚರಣೆ!
ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಇನ್ನಿಲ್ಲ; ಹೊಟ್ಟೆನೋವು ತಾಳಲಾರದೇ ಆತ್ಮ*ಹತ್ಯೆ!