ನಾವು ಪಕ್ಷದ ಪರವೇ ಹೊರತು ವ್ಯಕ್ತಿ ಪರ ಅಲ್ಲ : ಸಚಿವ

By Kannadaprabha NewsFirst Published Jun 18, 2021, 1:44 PM IST
Highlights
  • ನಾವು ಮೂಲ ಬಿಜೆಪಿಯವರು ಪಕ್ಷದ ಪರವಾಗಿಯೇ ಇರುತ್ತೇವೆ 
  •  ಪಕ್ಷದ ಪರವಾಗಿಯೇ ಇರುತ್ತೇವೆ ಹೊರತು ವ್ಯಕ್ತಿಯ ಪರ ಅಲ್ಲ
  • ರಾಜ್ಯ ಮೀನುಗಾರಿಕೆ ಇಲಾಖೆ ಸಚಿವ ಎಸ್‌ ಅಂಗಾರ ಹೇಳಿಕೆ

  ಕೋಲಾರ (ಜೂ.18): ನಾವು ಮೂಲ ಬಿಜೆಪಿಯವರು. ಪಕ್ಷದ ಪರವಾಗಿಯೇ ಇರುತ್ತೇವೆ ಹೊರತು ವ್ಯಕ್ತಿಯ ಪರ ಅಲ್ಲ. ರಾಜ್ಯದ ಹೈ ಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದು ರಾಜ್ಯ ಮೀನುಗಾರಿಕೆ ಇಲಾಖೆ ಸಚಿವ ಎಸ್‌ ಅಂಗಾರ ಹೇಳಿದರು. 

ಕೋಲಾರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ  ರಾಜಕಾರಣ ಸಂಬಂಧ ನಾನು ಏನೂ ಹೇಳುವುದಿಲ್ಲ. ಏನೇ ಸಮಸ್ಯೆಯಿದ್ದರೂ ಪಕ್ಷ ಹೈ ಕಮಾಂಡ್ ಅಗತ್ಯ ಕ್ರಮ ಕೈಗೊಳ್ಳಲಿದ್ದು ಅದಕ್ಕೆ ಬದ್ಧರಾಗಿದ್ದೇವೆ ಎಂದರು.

ಸರ್ಕಾರ, ನಾಯಕತ್ವದ ವಿರುದ್ಧ ಹೇಳಿಕೆ ನೀಡದಂತೆ ನಾಲ್ವರಿಗೆ ಬಿಜೆಪಿ ನೋಟಿಸ್  

ನಾನು ಪಕ್ಷದ ಪರವಾಗಿಯೇ ಇದ್ದೇವೆ. ಪಕ್ಷದ ತೀರ್ಮಾನದಂತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎಂದರು. 

ಪಕ್ಷದಲ್ಲಿ ಇರುವವರೆಲ್ಲಾ ಒಂದೇ : ನಾನು ಮೂಲ ಬಿಜೆಪಿಯವನು. ನಮ್ಮಲ್ಲಿ ವಲಸಿಗರು ಮೂಲ ಬಿಜೆಪಿಗರು ಎನ್ನುವ ಪ್ರಶ್ನೆ ಇಲ್ಲ. ಬಿಜೆಪಿಯಲ್ಲಿ ಇರುವವರೆಲ್ಲರೂ ಒಂದೇ ಎಂದರು. ಯಡಿಯೂರಪ್ಪ ಬದಲಾವಣೆ ಸಂಬಂಧ ಎಚ್ ವಿಶ್ವನಾಥ್ ಹೇಳಿಕೆಗೆ ಯಾವುದೆ ಪ್ರತಿಕ್ರಿಯೆ ನೀಡಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು.

ನಾವು ಮೂಲ ಬಿಜೆಪಿಯವರು. ಪಕ್ಷದ ಪರವಾಗಿಯೇ ಇರುತ್ತೇವೆ ಹೊರತು ವ್ಯಕ್ತಿಯ ಪರ ಅಲ್ಲ. ರಾಜ್ಯದ ಹೈ ಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದು ರಾಜ್ಯ ಮೀನುಗಾರಿಕೆ ಇಲಾಖೆ ಸಚಿವ ಎಸ್‌ ಅಂಗಾರ ಹೇಳಿದರು. 

ಕೋಲಾರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ  ರಾಜಕಾರಣ ಸಂಬಂಧ ನಾನು ಏನೂ ಹೇಳುವುದಿಲ್ಲ. ಏನೇ ಸಮಸ್ಯೆಯಿದ್ದರೂ ಪಕ್ಷ ಹೈ ಕಮಾಂಡ್ ಅಗತ್ಯ ಕ್ರಮ ಕೈಗೊಳ್ಳಲಿದ್ದು ಅದಕ್ಕೆ ಬದ್ಧರಾಗಿದ್ದೇವೆ ಎಂದರು. 

ನಾನು ಪಕ್ಷದ ಪರವಾಗಿಯೇ ಇದ್ದೇವೆ. ಪಕ್ಷದ ತೀರ್ಮಾನದಂತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎಂದರು. 

ಪಕ್ಷದಲ್ಲಿ ಇರುವವರೆಲ್ಲಾ ಒಂದೇ : ನಾನು ಮೂಲ ಬಿಜೆಪಿಯವನು. ನಮ್ಮಲ್ಲಿ ವಲಸಿಗರು ಮೂಲ ಬಿಜೆಪಿಗರು ಎನ್ನುವ ಪ್ರಶ್ನೆ ಇಲ್ಲ. ಬಿಜೆಪಿಯಲ್ಲಿ ಇರುವವರೆಲ್ಲರೂ ಒಂದೇ ಎಂದರು. ಯಡಿಯೂರಪ್ಪ ಬದಲಾವಣೆ ಸಂಬಂಧ ಎಚ್ ವಿಶ್ವನಾಥ್ ಹೇಳಿಕೆಗೆ ಯಾವುದೆ ಪ್ರತಿಕ್ರಿಯೆ ನೀಡಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು.

click me!