ಮಾನವ ಸಂಕುಲ ಆಯ್ತು : ಈಗ ಜಾನುವಾರುಗಳಿಗೆ ಕಾಡ್ತಿದೆ ಮಹಾಮಾರಿ

Kannadaprabha News   | Asianet News
Published : Sep 01, 2020, 09:21 AM IST
ಮಾನವ ಸಂಕುಲ ಆಯ್ತು : ಈಗ ಜಾನುವಾರುಗಳಿಗೆ ಕಾಡ್ತಿದೆ ಮಹಾಮಾರಿ

ಸಾರಾಂಶ

ಕೊರೋನಾ ಮಹಾಮಾರಿ ಮನುಷ್ಯರನ್ನು ಕಾಡುತ್ತಿದ್ದು, ಇದೀಗ ಜಾನುವಾರುಗಳಿಗೆ ಹೊಸ ರೋಗವೊಂದು ಕಾಡುತ್ತಿದೆ. ಇದರಿಂದ ಹೈನುಗಾರಿಕೆ ಮಾಡುವವರು ತಲ್ಲಣಿಸಿದ್ದಾರೆ.

ಕೊಪ್ಪಳ (ಸೆ.01):  ಕಲ್ಯಾಣ ಕರ್ನಾಟಕ ಯಾದಗಿರಿ ಮತ್ತು ಕಲಬುರಗಿಯಲ್ಲಿ ಜಾನುವಾರುಗಳಿಗೆ ‘ಲಂಪಿ ಸ್ಕಿನ್‌ ಡಿಸೀಸ್‌’(ಮುದ್ದೆ ರೋಗ) ರೋಗ ಕಾಣಿಸಿಕೊಂಡ ಬೆನ್ನಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ 1500 ಮತ್ತು ಹಾವೇರಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಜಾನುವಾರುಗಳಿಗೆ ಈ ರೋಗ ಕಾಣಿಸಿಕೊಂಡಿದೆ.

 ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಾದ್ಯಂತ ಸುಮಾರು 150 ಹಳ್ಳಿಗಳಲ್ಲಿ ಹಾಗೂ ಕುಷ್ಟಗಿ ತಾಲೂಕಿನಲ್ಲಿ 3 ಹಳ್ಳಿಗಳಲ್ಲಿ ಸೇರಿ ಸುಮಾರು 1500ಕ್ಕೂ ಹೆಚ್ಚು ಜಾನುವಾರುಗಳಿಗೆ ಈ ಸಾಂಕ್ರಾಮಿಕ ರೋಗ ಹರಡಿದೆ.ಗೋಮಾಂಸ ಭಕ್ಷಕರು ರಾಕ್ಷಸರು, ಪಾಪಿಗಳು : ಸಚಿವ ಸುಧಾಕರ್...

ಹಾವೇರಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ. ದನಕರುಗಳ ಮೈಮೇಲೆ ಗುಳ್ಳೆಗಳು ಕಾಣಿಸಿಕೊಂಡು ಅವು ಆಹಾರ ಸೇವಿಸುವುದನ್ನೇ ನಿಲ್ಲಿಸುತ್ತಿವೆ. ದಿನದಿಂದ ದಿನಕ್ಕೆ ಈ ರೋಗ ಕಾಣಿಸಿಕೊಳ್ಳುತ್ತಿರುವ ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಹಾಗೂ ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಿಗೆ ಇದರಿಂದ ಆತಂಕ 

ರಾಣಿಬೆನ್ನೂರು: ಸಿಸೇರಿಯನ್‌ ಮೂಲಕ ಹಸುವಿನ ಜೀವ ಉಳಿಸಿದ ವೈದ್ಯರು.

ಮಾನ ಸಂಕುಲವನ್ನು ಕೊರೋನಾ ಮಹಾಮಾರಿ ಕಾಡುತ್ತಿರುವ ಬೆನ್ನಲ್ಲೇ ಇದೀಗ ಜಾನುವಾರುಗಳಿಗೂ ಕೂಡ ಮಹಾಮಾರಿಯೊಂದು ಕಾಡುತ್ತಿದೆ.

PREV
click me!

Recommended Stories

ಬೆಂಗಳೂರು ನಗರದ ಬಿಜೆಪಿಯ ಮೂರು ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ
ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ