ಗ್ರಾಮೀಣ ಭಾಗದಲ್ಲಿKSRTC ನೂತನ ಐಷಾರಾಮಿ ಬಸ್ ಗಳ ಸೇವೆ

Published : Dec 31, 2023, 11:30 AM IST
ಗ್ರಾಮೀಣ ಭಾಗದಲ್ಲಿKSRTC ನೂತನ ಐಷಾರಾಮಿ ಬಸ್ ಗಳ ಸೇವೆ

ಸಾರಾಂಶ

ಗ್ರಾಮೀಣ ಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೂತನ ಐಷಾರಾಮಿ ಬಸ್ ಗಳ ಸೇವೆ ಆರಂಭಿಸಲಾಗಿದೆ.

 ಸುತ್ತೂರು :  ಗ್ರಾಮೀಣ ಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೂತನ ಐಷಾರಾಮಿ ಬಸ್ ಗಳ ಸೇವೆ ಆರಂಭಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಹದಿನಾರು ಗ್ರಾಮದಿಂದ ಸುತ್ತೂರು ಮಾರ್ಗವಾಗಿ ಮೈಸೂರಿಗೆ ತೆರಳುವ ನೂತನ ಐಷಾರಾಮಿ ಬಸ್ ಗೆ ಹದಿನಾರು ಗ್ರಾಪಂ ಅಧ್ಯಕ್ಷೆ ಸಣ್ಣತಾಯಮ್ಮ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಅಭಿಲಾಷ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ನೂತನವಾಗಿ 150 ಐಷಾರಾಮಿ ಸಾರಿಗೆ ಬಸ್ ಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ ವರುಣ ಕ್ಷೇತ್ರಕ್ಕೆ 5 ಬಸ್ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಬಸ್ ಸೇವೆ ಒದಗಿಸುವ ದೃಷ್ಟಿಯಿಂದ ನಮ್ಮ ಗ್ರಾಮದಿಂದ ನೂತನ ಐಷಾರಾಮಿ ಬಸ್ ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಲಾಯಿತು.

ಈ ವೇಳೆ ಮಾತನಾಡಿದ ಬಸ್ ಪ್ರಯಾಣಿಕರು, ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಬಸ್ ಸೇವೆ ಆರಂಭಿಸಿದ್ದು, ಈ ಬಸ್ ಪ್ರಯಾಣಿಸುವುದು ಮೊದಲಿಗಿಂತ ಸುಲಭ ಎನಿಸಿದ್ದು, ರೈಲಿನಲ್ಲಿ ಸಂಚರಿಸಿದ ಅನುಭವವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಪಂ ಸದಸ್ಯರಾದ ರವಿ, ನಾಗರಾಜ ನಾಯಕ, ಪ್ರಮೋದ್, ಶಿವಕುಮಾರ್, ಮಹದೇವಸ್ವಾಮಿ, ಗೋವಿಂದ, ರಂಗಸ್ವಾಮಿ, ವೀರಭದ್ರ, ಸುತ್ತೂರು ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಎಚ್.ಸಿ. ಬಸವರಾಜು, ಬಸ್ ಡ್ರೈವರ್ ಗಿರೀಶ್ ಹಾಗೂ ಸಿಬ್ಬಂದಿ ಇದ್ದರು.

PREV
Read more Articles on
click me!

Recommended Stories

ಆ ಲುಪುಟ ಹಿಂದೂ ಅದಾನೋ ಇಲ್ವೋ? ಪರಮೇಶ್ವರಾನಂದ ಸ್ವಾಮೀಜಿಗೆ ಯತ್ನಾಳ್ ತಿರುಗೇಟು
ಕರಾವಳಿಗೆ ಡಿಕೆಶಿ ಮೆಗಾ ಪ್ಲಾನ್: 300 ಕಿ.ಮೀ ವ್ಯಾಪ್ತಿಯಲ್ಲಿ 'ನ್ಯೂ ಟೂರಿಸಂ ಪಾಲಿಸಿ' ಘೋಷಣೆ!