ಕೂಡ್ಲಿಗಿಯ ರಸ್ತೆಯಲ್ಲಿ ವಾಲಿದ ಬಸ್: ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

Published : Oct 05, 2019, 08:28 AM IST
ಕೂಡ್ಲಿಗಿಯ ರಸ್ತೆಯಲ್ಲಿ ವಾಲಿದ ಬಸ್: ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

ಸಾರಾಂಶ

ತಾಲೂಕಿನ ಮೊರಬನಹಳ್ಳಿ ಗ್ರಾಮದಿಂದ ಕೂಡ್ಲಿಗಿಗೆ ಬಸ್‌ ಸಂಚರಿಸುತ್ತಿತ್ತು| ಈ ವೇಳೆ ರಸ್ತೆಯಲ್ಲಿ ರೈತರು ರಾಶಿ ಮಾಡುತ್ತಿದ್ದರು| ಚಾಲಕ ಬಸ್‌ ಅನ್ನು ರಸ್ತೆ ಬದಿಯಲ್ಲಿ ಓಡಿಸಿದ್ದರಿಂದ ವಾಲಿದ ಬಸ್‌| ಒಂದು ಬದಿಯ ಚಕ್ರಗಳು ಮೇಲೆ ಎದ್ದಿದ್ದವು| ಮಳೆ ಆಗಿದ್ದರಿಂದ ಇನ್ನೊಂದು ಬದಿಯ ಚಕ್ರಗಳು ಮಣ್ಣಿನಲ್ಲಿ ಹೂತಿದ್ದರಿಂದ ಬಸ್‌ ಪಲ್ಟಿಯಾಗುವುದು ತಪ್ಪಿದೆ| ನೂರಾರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ| 

ಕೂಡ್ಲಿಗಿ(ಅ.5): ರೈತರು ರಸ್ತೆಯಲ್ಲಿ ಫಸಲನ್ನು ಹಾಕಿದ್ದರಿಂದ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಗಳಿದ್ದ ಬಸ್‌ ಉರುಳುವುದು ಕೂದಲೆಯ ಅಂತರದಲ್ಲಿ ತಪ್ಪಿದೆ. ತಾಲೂಕಿನ ಮೊರಬನಹಳ್ಳಿ ಗ್ರಾಮದಿಂದ ಕೂಡ್ಲಿಗಿಗೆ ಬಸ್‌ ಸಂಚರಿಸುತ್ತಿತ್ತು. ಈ ವೇಳೆ ರಸ್ತೆಯಲ್ಲಿ ರೈತರು ರಾಶಿ ಮಾಡುತ್ತಿದ್ದರು. ಹೀಗಾಗಿ, ಚಾಲಕ ಬಸ್‌ ಅನ್ನು ರಸ್ತೆ ಬದಿಯಲ್ಲಿ ಓಡಿಸಿದ್ದಾನೆ. ಈ ವೇಳೆ ಬಸ್‌ ವಾಲಿದ್ದು, ಒಂದು ಬದಿಯ ಚಕ್ರಗಳು ಮೇಲೆ ಎದ್ದಿದ್ದವು. ಮಳೆ ಆಗಿದ್ದರಿಂದ ಇನ್ನೊಂದು ಬದಿಯ ಚಕ್ರಗಳು ಮಣ್ಣಿನಲ್ಲಿ ಹೂತಿದ್ದರಿಂದ ಬಸ್‌ ಪಲ್ಟಿಯಾಗುವುದು ತಪ್ಪಿದೆ. ಈ ಘಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ವೇಳೆ ವಿದ್ಯಾರ್ಥಿಗಳ ಪಾಲಕರು ರಸ್ತೆಯಲ್ಲಿ ಹಾಕಿದ್ದ ರಾಶಿಯನ್ನು ತೆಗೆಯುವಂತೆ ರೈತರಿಗೆ ತಾಕೀತು ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಕೂಡ್ಲಿಗಿಯ ಯುವ ಬ್ರಿಗೇಡ್‌ ಸಂಘಟನೆಯ ಕಾರ್ಯಕರ್ತ ಸಚಿನ್‌ ಕುಮಾರ್‌ ಅವರು, ರಸ್ತೆಯಲ್ಲಿ ಜೋಳ ಇತರೆ ಫಸಲುಗಳನ್ನು ರಸ್ತೆಯಲ್ಲಿ ಹಾಕಿ ಒಕ್ಕಲುತನ ಮಾಡುವುದರಿಂದ ಅಪಘಾತಗಳು ಆಗುವ ಸಂಭವವಿದೆ. ನೂರಾರು ವಿದ್ಯಾರ್ಥಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮುಂದೆ ಈ ರೀತಿಯ ಅಪಘಾತಗಳು ಆಗದಂತೆ ನಮ್ಮ ಯುವ ಬ್ರಿಗೇಡ್‌ ಸಂಘಟನೆ ವತಿಯಿಂದ ರೈತರಿಗೆ ಅರಿವು ಮೂಡಿಸುವ ಮತ್ತು ಅಪಘಾತಗಳನ್ನು ತಪ್ಪಿಸುವ ಕಾರ್ಯಕ್ಕೆ ಕೈ ಜೋಡಿಸಲಾಗುವುದು ಎಂದು ಹೇಳಿದ್ದಾರೆ. 
 

PREV
click me!

Recommended Stories

ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು