
ಬಳ್ಳಾರಿ, (ಮೇ.03): ಲಾಕ್ ಡೌನ್ ಕಾರಣದಿಂದಾಗಿ ಬೆಂಗಳೂರಿನಲ್ಲಿ ಸಿಲುಕಿದ್ದ ಬಾಗಲಕೋಟೆ ಕಾರ್ಮಿಕರನ್ನು ಕರೆದೊಯ್ದು ವಾಪಸ್ ಆಗುತ್ತಿದ್ದ ಕೆಎಸ್ಆರ್ಟಿಸಿ ಬಸ್ವೊಂದು ಅಪಘಾತಕ್ಕಿಡಾಗಿದೆ.
ಬೆಂಗಳೂರಿನಿಂದ ಕರೆದೊಯ್ದು ಬಾಗಕೋಟೆಗೆ ಕಾರ್ಮಿಕರನ್ನು ಬಿಟ್ಟು ವಾಪಸ್ ರಾಮನಗರಕ್ಕೆ ಬರುವಾಗ ಇಂದು (ಭಾನುವಾರ) ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್: ಮೂರು ದಿನ KSRTC ಬಸ್ ಸಂಚಾರ ಉಚಿತ..!
ಅದೇ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ನೋಡಿ ಕಾರು ನಿಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಲಾಕ್ ಆಗಿರುವ ವಲಸೆ ಕಾರ್ಮಿಕರನ್ನು ರಾಜ್ಯ ಸರ್ಕಾರ ಅವರವರ ಊರಿಗೆ ಕಳುಹಿಸುತ್ತಿದೆ. ಅದರಂತೆ ಈ ಬಸ್ ಸಹ ಬೆಂಗಳೂರಿನಿಂದ ಕಾರ್ಮಿಕರನ್ನು ಕರೆದುಕೊಂಡು ಬಾಗಲಕೋಟೆ ಹೋಗಿತ್ತು.